ಸಂಗೀತ ಒಂದು ಸಾಧನೆ ಆರಾಧನೆ: ಕಾಕಡೆ
Music is a form of worship: Kakade
ಗೋಕಾಕ 14: ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಹಾಡಿನ ಮೋಡಿಗೆ ಒಳಗಾಗದಿರುವವರು ಭೂಮಿಯ ಮೇಲೆ ಯಾರೂ ಇಲ್ಲ, ಸಂಗೀತ ಒಂದು ಸಾಧನೆ ಮತ್ತು ಸಂಗೀತ ಒಂದು ಆರಾಧನೆ, ಕಷ್ಟದಿಂದಲೇ ಸಾಧನೆಯ ಶಿಖರವೇರಿದ ಆಶಾ ಭೋಂಸ್ಲೆ ಅಮರಕಲಾವಿದೆ. ಎಂದು ಶಿಕ್ಷಕ ಹಾಗೂ ವಾಗ್ಮಿ ರಾಮಚಂದ್ರ ಕಾಕಡೆ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಮಧುರ ಸಂಗೀತ ಬಳಗ ಗುಂಪು ಕಲಾವಿದರು, ಶ್ರೀ ಸರ್ವೇಶ್ವರ ಜಾನಪದ ಕಲಾ ಸಂಸ್ಥೆ, ಬಿಂದು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಹೆಸರಾಂತ ಚಲನಚಿತ್ರ ಗಾಯಕಿ ಆಶಾ ಭೋಂಸ್ಲೆ ಶೋಕ ಆಚರಣೆ ಸಭೆಯಲ್ಲಿ ಮಾತನಾಡಿದರು.
ಮೂಡಲಗಿ ಚೈತನ್ಯ ಆಶ್ರಮದ ವೈ ಬಿ ಪಾಟೀಲ, ಶಿಕ್ಷಕ ಹಾಗೂ ಚಿಂತಕ ಶಂಕರ ಕ್ಯಾಸ್ತಿ, ಹಿರಿಯ ಬೈಲಾಟ ಕಲಾವಿದ ಹಾಗೂ ಸಾಹಿತಿ ಈಶ್ವರ್ ಚಂದ್ರ ಬೆಟಗೇರಿ, ಶಿಕ್ಷಕ ಹಾಗೂ ಕವಿ ಈಶ್ವರ ಮಮದಾಪುರ, ನೇಸರಗಿಯ ಸಾಹಿತಿ ಸಿ.ವಾಯ್ ಮೆಣಸಿನಕಾಯಿ, ಬಸವಜೋತಿ ಐಟಿಐ ಕಾಲೇಜ್ ಚೇರ್ಮನ್ ಅಶೋಕ್ ಲಗಮಪ್ಪ ಗೋಳ ಇದ್ದರು. ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು.ಚಿಂತಕ ಅರುಣ ಸವತಿಕಾಯಿ ನಿರೂಪಿಸಿ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 