ಸಂಗೀತ ಒಂದು ಸಾಧನೆ ಆರಾಧನೆ: ಕಾಕಡೆ
Music is a form of worship: Kakade
ಗೋಕಾಕ 14: ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಹಾಡಿನ ಮೋಡಿಗೆ ಒಳಗಾಗದಿರುವವರು ಭೂಮಿಯ ಮೇಲೆ ಯಾರೂ ಇಲ್ಲ, ಸಂಗೀತ ಒಂದು ಸಾಧನೆ ಮತ್ತು ಸಂಗೀತ ಒಂದು ಆರಾಧನೆ, ಕಷ್ಟದಿಂದಲೇ ಸಾಧನೆಯ ಶಿಖರವೇರಿದ ಆಶಾ ಭೋಂಸ್ಲೆ ಅಮರಕಲಾವಿದೆ. ಎಂದು ಶಿಕ್ಷಕ ಹಾಗೂ ವಾಗ್ಮಿ ರಾಮಚಂದ್ರ ಕಾಕಡೆ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಮಧುರ ಸಂಗೀತ ಬಳಗ ಗುಂಪು ಕಲಾವಿದರು, ಶ್ರೀ ಸರ್ವೇಶ್ವರ ಜಾನಪದ ಕಲಾ ಸಂಸ್ಥೆ, ಬಿಂದು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಹೆಸರಾಂತ ಚಲನಚಿತ್ರ ಗಾಯಕಿ ಆಶಾ ಭೋಂಸ್ಲೆ ಶೋಕ ಆಚರಣೆ ಸಭೆಯಲ್ಲಿ ಮಾತನಾಡಿದರು.
ಮೂಡಲಗಿ ಚೈತನ್ಯ ಆಶ್ರಮದ ವೈ ಬಿ ಪಾಟೀಲ, ಶಿಕ್ಷಕ ಹಾಗೂ ಚಿಂತಕ ಶಂಕರ ಕ್ಯಾಸ್ತಿ, ಹಿರಿಯ ಬೈಲಾಟ ಕಲಾವಿದ ಹಾಗೂ ಸಾಹಿತಿ ಈಶ್ವರ್ ಚಂದ್ರ ಬೆಟಗೇರಿ, ಶಿಕ್ಷಕ ಹಾಗೂ ಕವಿ ಈಶ್ವರ ಮಮದಾಪುರ, ನೇಸರಗಿಯ ಸಾಹಿತಿ ಸಿ.ವಾಯ್ ಮೆಣಸಿನಕಾಯಿ, ಬಸವಜೋತಿ ಐಟಿಐ ಕಾಲೇಜ್ ಚೇರ್ಮನ್ ಅಶೋಕ್ ಲಗಮಪ್ಪ ಗೋಳ ಇದ್ದರು. ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು.ಚಿಂತಕ ಅರುಣ ಸವತಿಕಾಯಿ ನಿರೂಪಿಸಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 