ನಗರಸಭೆಯ ಸದಸ್ಯ ದಿ,ಸಿದ್ದು ಮೀಸಿ ನಿಧನ: ಶ್ರದ್ಧಾಂಜಲಿ ಸಭೆ
Municipal Council member Di, Siddu Meesi passes away: Tribute meeting
ಜಮಖಂಡಿ 26: ನಗರಸಭೆಯ ಸದಸ್ಯ ದಿ,ಸಿದ್ದು ಮೀಸಿ ಅವರು ಹೃದಘಾತದಿಂದ ನಿಧನಕ್ಕೆ ತುತ್ತಾಗಿರುವದರಿಂದ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಗಲಿದ ಸದಸ್ಯನಿಗೆ ಶ್ರದ್ಧಾಂಜಲಿ ಅರ್ಿಸಲಾಯಿತು.
ಸಾಮಾನ್ಯ ಸಭೆಯನ್ನು ಮೌನಾಚರಣೆಯೊಂದಿಗೆ ಪ್ರಾರಂಭಿಸಿ, ಸಂಕೇತಿಕವಾಗಿ ಸಭೆ ನಡೆಸಲಾಯಿತು. ಕಳೆದ ಸಭೆಯ ನಿರ್ಣಯಗಳನ್ನು ಅಂಗೀಕರಿಸುವದು, ಜನನ ಮರಣಗಳ ಮಾಹಿತಿ, ನಗರಸಭೆಗೆ 75 ಲಕ್ಷರೂ, ಗಳವರೆಗೆ ಅನುದಾನ ಖರ್ಚು ಮಾಡಲು ಸರ್ಕಾರ ಅನುಮತಿಸಿದ್ದು, ಟೆಂಡರ್ ಪ್ರಕ್ರಿಯೆಗಳ ವಿವಿರಗಳನ್ನು ಪೌರಾಯುಕ್ತ ಜ್ಯೋತಿ ಗೀರೀಶ ಸಭೆಯ ಗಮನಕ್ಕೆ ತಂದರು.
ನಂತರ ಅಗಲಿದ ನಾಯಕ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಿ,ಸಿದ್ದು ಮೀಸಿ ಅವರ ಕುರಿತು ಸದಸ್ಯರುಗಳಾದ ಗುರುಪಾದಪ್ಪ ಮೆಂಡಿಗೇರಿ, ಸುನೀಲ ಶಿಂಧೆ, ಮಲ್ಲಮ್ಮ ಪಾಯಗೊಂಡ, ಪೂಜಾ ವಾಳ್ವೇಕರ, ಪ್ರಕಾಶ ಹಂಗರಗಿ, ಕುಶಾಲ ವಾಗಮೋರೆ, ದಶರಥ ವಗ್ಗೆಣ್ಣವರ, ಪ್ರಶಾಂತ ಚರಕಿ ಮಾತನಾಡಿದರು.
ನಗರಸಭೆಯ ಅಧ್ಯಕ್ಷ ಪರಮಾನಂದ ಗೌರೋಜಿ ಮಾತನಾಡಿ, ಸಿದ್ದು ಮೀಸಿ ಅವರೊಂದಿಗಿದ್ದ ತಮ್ಮ ಒಡನಾಡದ ಬಗ್ಗೆ ವಿವರಿಸಿದರು. ಅವರನ್ನು ಕಳೆದು ಕೊಂಡಿದ್ದು ಪಕ್ಷಕ್ಕೆ ಹಾಗೂ ನಗರಸಭೆಗೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟರು. ದೇವರು ಅವರ ಆತ್ನಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ವರ್ಗದವರ ದುಖ:ದಲ್ಲಿ ತಾವೆಲ್ಲರೂ ಭಾಗಿಯಾಗುವದುದಾಗಿ ತಿಳಿಸಿದರು.
ಹಿರಿಯ ಸದಸ್ಯರಾದ ದಿಲಾವರ ಶಿರೋಳ, ಈಶ್ವರ ವಾಳೆಣ್ಣವರ, ನಗರಸಭೆಯ ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ನಗರದಭೆ ಸದಸ್ಯರು, ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 