ಪೌರಕಾರ್ಮಿಕರ ತಂಡಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಪೌರಾಯುಕ್ತ ವೆಂಕಟೇಶ್
Municipal Commissioner Venkatesh commends the team of municipal workers
ಪೌರಕಾರ್ಮಿಕರ ತಂಡಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಪೌರಾಯುಕ್ತ ವೆಂಕಟೇಶ್
ಕೊಪ್ಪಳ 26: ನಗರ ಸಭೆಯ ಪೌರ ಕಾರ್ಮಿಕರ ತಂಡ ನಗರದಲ್ಲಿ ಸ್ವಚ್ಛತೆ ಗಾಗಿ ಸ್ವಚ್ಛತೆ ಸಾರ್ವಜನಿಕರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಶ್ರಮಿಸುವ ಪೌರ ಕಾರ್ಮಿಕರ ತಂಡದ ಕಾರ್ಯಕ್ಕೆ ಕಾರ್ಯಕ್ರಮ ಸಂಘಟಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಕೊಪ್ಪಳ ನಗರಸಭೆಯ ಪೌರಾಯುಕ್ತಾರಾದ ವೆಂಕಟೇಶ್ ನಾಗ್ನೂರ್ರವರ ಸೂಚನೆ ಮತ್ತು ನಿರ್ದೇಶನದಂತೆ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಪೌರಕಾರ್ಮಿಕರು ಗಳು ಸೇರಿ ಸ್ವಚ್ಛಗೊಳಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಿರಿಯ ಆರೋಗ್ಯ ನೀರೀಕ್ಷಕ ಲಾಲ್ ಷಾ ಮನಿಯಾರ್ ಸ್ವಚ್ಛತಾ ವಿಭಾಗದ ಗವಿಸಿದ್ದಪ್ಪ ಕಟ್ಟಿಮನಿ, ನೀರಿನ ಮೇಲೆ ವಿಚಾರಕ ವಸಂತ್ ಬೆಲ್ಲದ್, ಪೌರಕಾರ್ಮಿಕರು ಗಳಾದ ಶಿವಪ್ಪ ಹನುಮಂತಪ್ಪಗಿಣಿಗೇರಿ, ಬಸವರಾಜ್ ಗಿಣಿಗೇರಿ, ಪಾಲ್ಗೊಂಡಿದ್ದು ಅಲ್ಲದೆ ಸಾಹಿತ್ಯ ಭವನದ ಮೇಲ್ವಿಚಾರಕ ಸೋಮರಾಜ್ ಹಿಟ್ನಾಳ್ ರವರುಗಳು ಸಹ ಪಾಲ್ಗೊಂಡು ಇಂದು ಸಂಜೆ ನಡೆಯಲಿರುವ ಬೃಹತ್ ಕವಿ ಸಮ್ಮೇಳನ ಹಾಗೂ ಮುಷಾಯರಾ ಕಾರ್ಯಕ್ರಮದ ವ್ಯವಸ್ಥೆಗಾಗಿ ಶ್ರಮಿಸಿರುವುದಕ್ಕೆ ಕಾರ್ಯಕ್ರಮದ ಸಂಚಾಲಕ ಸಮಿತಿಯ ಪದಾಧಿಕಾರಿಗಳು ನಗರಸಭೆಯ ಎಲ್ಲಾಅಧಿಕಾರಿ ವರ್ಗದವರಿಗೆ ಹಾಗೂ ವಿಶೇಷವಾಗಿ ಪೌರಕಾರ್ಮಿಕ ವರ್ಗದವರಿಗೆ ಅಭಿನಂದಿಸಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾಯಿಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 