ಮಿಸ್ಟರ್ & ಮಿಸ್. ಜೆ.ಎಂ.ಐ.ಟಿ ಡ್ಯಾನ್ಸ್ ಜೆ.ಎಂ.ಐ.ಟಿ ಡ್ಯಾನ್ಸ್ ಸೋಲೋ ಸ್ಪರ್ಧೆಯ ಫಲಿತಾಂಶ
Mr. & Ms. JMIT Dance JMIT Dance Solo Competition Results
ಲೋಕದರ್ಶನ ವರದಿ
ಚಿತ್ರದುರ್ಗ 29: ದಿ. 28.4.2026ರ ಸಂಜೆ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ಜಯದೇವ ವೇದಿಕೆಯಲ್ಲಿ ಸ್ಫೂರ್ತಿ 2026ರ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಸ್ಟರ್ ಜೆ.ಎಂ.ಐ.ಟಿ, ಮಿಸ್.ಜೆ.ಎಂ.ಐ.ಟಿ ಹಾಗು ಸೋಲೊ ಡ್ಯಾನ್ಸ್ ಸ್ಪರ್ಧೆಗಳನ್ನು ಏರಿ್ಡಸಲಾಗಿತ್ತು. ಈ ಸ್ಫರ್ಧೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಫರ್ಧೆಯ ತೀರ್ುಗಾರರಾಗಿ ಖ್ಯಾತ ನೃತ್ಯಪಟು ಕೌಶಿಕ್ ಸುವರ್ಣ ಹಾಗೂ ಸಮನ್ವಿ ಸುವರ್ಣ ಆಗಮಿಸಿದ್ದರು.
ಮಿಸ್ಟರ್. ಜೆ.ಎಂ.ಐ.ಟಿ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 4ನೇ ಸೆಮಿಸ್ಟರ್ನ ತರುಣ್.ಬಿ.ವಿ ಪ್ರಥಮ ಹಾಗು ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ನ ಜೀವನ್ .ಆರ್ ದ್ವೀತಿಯ ಸ್ಥಾನ ಪಡೆದರು.
ಮಿಸ್.ಜೆ.ಎಂ.ಐ.ಟಿ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 4ನೇ ಸೆಮಿಸ್ಟರ್ನ ಪ್ರಾಂಜಲ ಎನ್.ಎಂ ಪ್ರಥಮ ಹಾಗು ಎಲೆಕ್ಟ್ರಿಕಲ್ ವಿಭಾಗದ 4ನೇ ಸೆಮಿಸ್ಟರ್ನ ಅಲ್ಫಿಯಾ.ಯೈ ದ್ವೀತಿಯ ಸ್ಥಾನ ಪಡೆದರು.
ಎಲೆಕ್ಟ್ರಾನಿಕ್ಸ್ ್ಘ ಕಮ್ಯೂನಿಕೇಶನ್ ವಿಭಾಗದ 8ನೇ ಸೆಮಿಸ್ಟರ್ನ ಕೀರ್ತನ, ಸಿವಿಲ್ ವಿಭಾಗದ 4ನೇ ಸೆಮಿಸ್ಟರ್ನ ಯಶವಂತ್ ಇವರುಗಳು ಉತ್ತಮ ನಡಿಗೆಗಾಗಿ ಪ್ರಶಸ್ತಿ ಪಡೆದರು.
ಎಲೆಕ್ಟ್ರಿಕಲ್ ವಿಭಾಗದ 6ನೇ ಸೆಮಿಸ್ಟರ್ನ ಹರ್ಷಿತಾ.ಎನ್ ಹಾಗು ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ನ ಜೀವನ್ .ಆರ್ ಸಾಂಪ್ರದಾಯಿಕ ಉಡುಗೆಗಾಗಿ ಪ್ರಶಸ್ತಿ ಪಡೆದರು.
ಎಲೆಕ್ಟ್ರಿಕಲ್ ವಿಭಾಗದ 4ನೇ ಸೆಮಿಸ್ಟರ್ನ ಬಬಿತಾ ಹಾಗೂ ಎಲೆಕ್ಟ್ರಿಕಲ್ ವಿಭಾಗದ 6ನೇ ಸೆಮಿಸ್ಟರ್ನ ಶಿವಕುಮಾರ್ ಪಾಶ್ಚಾತ್ಯ ಉಡುಗೆಗಾಗಿ ಪ್ರಶಸ್ತಿ ಪಡೆದರು.
ಸೋಲೊ ಡ್ಯಾನ್ಸ್ ಸ್ಪರ್ಧೆಯಲ್ಲಿ ಸಿವಿಲ್ ವಿಭಾಗದ 6ನೇ ಸೆಮಿಸ್ಟರ್ನ ಸಂಜನಾಗೌಡ ಜಿ.ಎಸ್ ಪ್ರಥಮ ಸ್ಥಾನ ಪಡೆದರು.
ಇದೇ ಸಂದರ್ಭದಲ್ಲಿ “ಮೋಡ ಕವಿದ ವಾತವರಣ” ಕನ್ನಡ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಪಿ.ಬಿ.ಭರತ್, ನಟನಟಿಯರಾದ ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕ, ಸ್ಫೂರ್ತಿ 2026ರ ಮುಖ್ಯ ಸಂಚಾಲಕರಾದ ಡಾ.ಕೃಷ್ಣಾರೆಡ್ಡಿ.ಕೆ.ಆರ್, ಡಾ.ಅರವಿಂದ್.ಟಿ.ವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಿದ್ದೇಶ್ ಹಾಗು ದಿವ್ಯ ನಿರೂಪಿಸಿ ನಿರ್ವಹಿಸಿದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 