ಜೀವ ಜಲ ಬಂಗಾರಕ್ಕಿಂತ ಅತೀ ಮೌಲ್ಯಯುತವಾದುದು: ಡಾ.ಪಂಡಿತಾರಾಧ್ಯ ಶ್ರೀಗಳು
ಸಾಣೇಹಳ್ಳಿ: ನಾಡಿನಲ್ಲಿ ಮಳೆಯ ಅಭಾವ ತುಂಬಾ ಇದೆ. ಹಾಗಾಗಿ ಮಕ್ಕಳು ನೀರನ್ನು ಮಿತವಾಗಿ ಬಳಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು. ರೈತರ ಸ್ಥಿತಿಯನ್ನು ಗಮನಿಸಿದರೆ ಎಲ್ಲಲ್ಲಿಂದಲೋ ನೀರನ್ನು ತಂದು ತಮ್ಮ ತೋಟ ತುಡಿಕೆಗಳನ್ನು ಉಳಿಸಿಕೊಳ್ಳೋದನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ರೈತರು ಇದರ ಸಹವಾಸವೇ ಬೇಡ ಎಂದು ಸುಸ್ತಾಗಿ ಹೋಗಿದ್ದಾರೆ. ಜೀವ ಜಲ ಬಂಗಾರಕ್ಕಿಂತ ಅತೀ ಮೌಲ್ಯಯುತವಾದುದು. ಆದ್ದರಿಂದ ವಿದ್ಯಾಥರ್ಿಗಳು ಇಂತಹ ಜೀವಜಲ'ವನ್ನು ಮಿತವಾಗಿ ಬಳಸಬೇಕು ಎಂದು ನಗರದ ಶಿವಕುಮಾರ ರಂಗಮಂದಿರದಲ್ಲಿ ನಡೆದ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾಥರ್ಿ ಸಂಘಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಹೆಜ್ಜೆ 'ಗುರುತು ಸ್ಮರಣೆ' ಸಂಚಿಕೆ ಉದ್ಘಾಟನಾ ಸಮಾರಂಭದ ಮಾತನಾಡಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು.
ವಿದ್ಯಾಥರ್ಿಸಂಘಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಶಿವಮೊಗ್ಗ ಬಸವಕೇಂದ್ರ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ದೀಪವನ್ನು ಬೆಳಗಿ ಉದ್ಘಾಟನೆ ಮಾಡಿದ್ವಿ, ಮೊದಲನೆಯ ಬಾರಿ ದೀಪ ಹತ್ತಲಿಲ್ಲ, ಆದರೆ ಎರಡನೆಯ ಬಾರಿ ಬೆಳಗಿಸಿದಾಗ ಸ್ವಲ್ಪ ಸಮಯ ಉರಿದು ನಂದಿತು, ಆವಾಗ ನಮಗೆ ಅನಿಸಿದ್ದು ದೀಪ ಬೆಳಗಿಸುವುದು ತುಂಬಾ ಕಷ್ಟ ಅಂತ. ಏಕೆಂದರೆ ಒಂದು ಪ್ರಣತೆ ತಯಾರಾಗಬೇಕಾದಲ್ಲಿ ಕುಂಬಾರ ವರ್ಷವಿಡಿ ಕಷ್ಟಪಡಬೇಕು. ಬತ್ತಿ ತಯಾರಗಬೇಕಾದಲ್ಲಿ ರೈತ ವರ್ಷವಿಡಿ ಕಷ್ಟಪಡಬೇಕು. ಹಾಗೂ ಎಣ್ಣೆ ತಯಾರಾಗಬೇಕಾದಲ್ಲಿ ಮತ್ತೊಬ್ಬ ರೈತ ವರ್ಷವಿಡಿ ಕಷ್ಟಪಡಬೇಕು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾತನಾಡಿದ ಹೊಸದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯ್ಯಪ್ಪ ಮಾತನಾಡಿ; ನನಗೆ ತುಂಬಾ ಖುಷಿಯ ವಿಚಾರ ಏನೆಂದರೆ ಇಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾಥರ್ಿಗಳ ಮೂಲಕ ಅನುಷ್ಠ್ಠಾನಗೊಳಿಸುತ್ತಿರುವುದು. ಇದರಿಂದ ಮಕ್ಕಳಲ್ಲಿ ನಾಯಕತ್ವದ ಗುಣ ಹಾಗೂ ಸೇವಾಮನೋಭಾವನೆ ಬೆಳೆಯುತ್ತದೆ. ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಶಾಸಕರು ಮಾತ್ರವೇ ನಾಯಕರುಗಳಲ್ಲ, ಯಾರು ಮುಖ್ಯವಾಗಿ ಒಂದು ಮನೆಗೆ, ಸಮಾಜಕ್ಕೆ ಬೇಕಗಿದೆಯೋ ಅಂತವರು ನಿಜವಾದ ನಾಯಕರು. ಅಂತಹ ನಾಯಕರು ನಮ್ಮ ಪೂಜ್ಯರು ಎಂದರು.
ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ ಮಾತನಾಡಿ ಸಂಘಗಳ ಉದ್ಘಾಟನಾ ಸಮಾರಂಭ ತುಂಬಾ ಚೆನ್ನಾಗಿ ಸರಳವಾಗಿ ಮೂಡಿಬಂದಿತು, ಇಲ್ಲಿ ಓದುವ ವಿದ್ಯಾಥರ್ಿಗಳು ತುಂಬಾ ಪುಣ್ಯವಂತರು, ಇಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಸಂಸ್ಕೃತಿ ದೊರೆಯುತ್ತದೆ. ನಿಮ್ಮ ತಂದೆ ತಾಯಿಗಳು ತುಂಬಾ ಕಷ್ಟ ಪಟ್ಟು ಸಾಣೇಹಳ್ಳಿಗೆ ಸೇರಿಸಿದ್ದಾರೆ. ಅವರಿಗೆ ಹಾಗೂ ಪೂಜ್ಯರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಎಂದರು.
ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಭಾನುಪ್ರಿಯ ಸ್ವಾಗತಿಸಿದರೆ ವಂದನಾ ಚಂದನ ಕಾರ್ಯಕ್ರಮ ನಿರೂಪಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 