ಮಹಾದಾಸೋಹದಲ್ಲಿ ಇಂದು ಭಕ್ತರಿಗೆ 18 ಲಕ್ಷಕ್ಕಿಂತಲೂ ಹೆಚ್ಚು ಬಿಸಿ ಬಿಸಿ ಮಿರ್ಚಿಗಳು
ಲೋಕದರ್ಶನ ವರದಿ
ಕೊಪ್ಪಳ 13: ಗವಿಮಠದ ಜಾತ್ರೆಯ ವಿಶೇಷತೆಗಳಲ್ಲೊಂದಾದ ಮಹಾದಾಸೋಹದಲ್ಲಿ ಇಂದು ಮಹಾರಥೋತ್ಸವದ ಎರಡನೇ ದಿನ ಲಕ್ಷ -ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ, ಚಪಾತಿ, ಪಲ್ಲೆ, ಮಾದಲಿ, ಹಾಲು, ತುಪ್ಪ, ಅನ್ನಾ, ಸಾಂಬಾರ್, ಚಟ್ನಿಪುಡಿ, ಮಜ್ಜಿಗೆ ಇವುಗಳ ಜೊತೆಗೆ ಬಿಸಿ ಬಿಸಿಯಾದ ಮಿರ್ಚಿಯನ್ನು ವಿತರಿಲಾಯಿತು. ಕಳೆದ 5 ವರ್ಷಗಳಿಂದಲೂ ಮಹಾದಾಸೋಹದಲ್ಲಿ ಮಿರ್ಚಿಗಳನ್ನು ನೀಡಲಾಗುತ್ತಿದೆ. ಮೊದಲಿಗೆ ಕೊಪ್ಪಳದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಗೆಳೆಯರ ಬಳಗವು ಈ ಸೇವೆಗೈಯುತ್ತಿತ್ತು. ಈ ಸಲ ಗವಿಮಠವೇ ವಹಿಸಿಕೊಂಡಿದೆ. 18 ಕ್ವಿಂಟಾಲ್ ಕಡ್ಲಿಬೇಳೆ ಹಿಟ್ಟು, 15 ಕ್ವಿಂಟಾಲ್ ಹಸೆಮೆಣಸಿನಕಾಯಿ, 10 ಬ್ಯಾರಲ್ ಎಣ್ಣೆ ಅಲ್ಲದೇ ಜೀರಗಿ, ಅಡುಗೆ ಸೋಡಾ, ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಮುಂಜಾನೆಯಿಂದ 300 ಕ್ಕಿಂತಲೂ ಹೆಚ್ಚೂ ಜನ ಬಾಣಸಿಗರು,ಸ್ವಯಂ ಸೇವಕರು ಬಸಿ ಬಿಸಿ ಮಿರ್ಚಿಗಳನ್ನು ತಯಾರಿಸುವಂತಹ ಹಾಗೂ ವಿತರಿಸುವಂತಹ ಕೆಲಸದಲ್ಲಿ ಬೆಳಗಿನಿಂದ ರಾತ್ರಿಯವರೆಗೆ ನಿರತರಾಗಿದ್ದಾರೆ. ಇಂದು ಭಕ್ತರಿಗೆ 18 ಲಕ್ಷಕ್ಕಿಂತಲೂ ಹೆಚ್ಚೂ ಮಿರ್ಚಿಗಳು ತಯಾರಾಗುತ್ತಿವೆ. ಭಕ್ತರಿಗೆ ಪ್ರಸಾದದಲ್ಲಿ ಮಿರ್ಚಿಗಳನ್ನು ಒದಗಿಸುವ ಸಂಕಲ್ಪವನ್ನು ಪೂಜ್ಯರು ಮಾಡಿದ್ದರಿಂದ ಪ್ರತಿವರ್ಷ ಮಾದಾಸೋಹದಲ್ಲಿ ಭಕ್ತರಿಗೆ ಮಿರ್ಚಿಗಳನ್ನು ನೀಡಲಾಗುತ್ತಿದೆ.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 