ಮಹಾದಾಸೋಹದಲ್ಲಿ ಇಂದು ಭಕ್ತರಿಗೆ 18 ಲಕ್ಷಕ್ಕಿಂತಲೂ ಹೆಚ್ಚು ಬಿಸಿ ಬಿಸಿ ಮಿರ್ಚಿಗಳು
ಲೋಕದರ್ಶನ ವರದಿ
ಕೊಪ್ಪಳ 13: ಗವಿಮಠದ ಜಾತ್ರೆಯ ವಿಶೇಷತೆಗಳಲ್ಲೊಂದಾದ ಮಹಾದಾಸೋಹದಲ್ಲಿ ಇಂದು ಮಹಾರಥೋತ್ಸವದ ಎರಡನೇ ದಿನ ಲಕ್ಷ -ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ, ಚಪಾತಿ, ಪಲ್ಲೆ, ಮಾದಲಿ, ಹಾಲು, ತುಪ್ಪ, ಅನ್ನಾ, ಸಾಂಬಾರ್, ಚಟ್ನಿಪುಡಿ, ಮಜ್ಜಿಗೆ ಇವುಗಳ ಜೊತೆಗೆ ಬಿಸಿ ಬಿಸಿಯಾದ ಮಿರ್ಚಿಯನ್ನು ವಿತರಿಲಾಯಿತು. ಕಳೆದ 5 ವರ್ಷಗಳಿಂದಲೂ ಮಹಾದಾಸೋಹದಲ್ಲಿ ಮಿರ್ಚಿಗಳನ್ನು ನೀಡಲಾಗುತ್ತಿದೆ. ಮೊದಲಿಗೆ ಕೊಪ್ಪಳದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಗೆಳೆಯರ ಬಳಗವು ಈ ಸೇವೆಗೈಯುತ್ತಿತ್ತು. ಈ ಸಲ ಗವಿಮಠವೇ ವಹಿಸಿಕೊಂಡಿದೆ. 18 ಕ್ವಿಂಟಾಲ್ ಕಡ್ಲಿಬೇಳೆ ಹಿಟ್ಟು, 15 ಕ್ವಿಂಟಾಲ್ ಹಸೆಮೆಣಸಿನಕಾಯಿ, 10 ಬ್ಯಾರಲ್ ಎಣ್ಣೆ ಅಲ್ಲದೇ ಜೀರಗಿ, ಅಡುಗೆ ಸೋಡಾ, ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಮುಂಜಾನೆಯಿಂದ 300 ಕ್ಕಿಂತಲೂ ಹೆಚ್ಚೂ ಜನ ಬಾಣಸಿಗರು,ಸ್ವಯಂ ಸೇವಕರು ಬಸಿ ಬಿಸಿ ಮಿರ್ಚಿಗಳನ್ನು ತಯಾರಿಸುವಂತಹ ಹಾಗೂ ವಿತರಿಸುವಂತಹ ಕೆಲಸದಲ್ಲಿ ಬೆಳಗಿನಿಂದ ರಾತ್ರಿಯವರೆಗೆ ನಿರತರಾಗಿದ್ದಾರೆ. ಇಂದು ಭಕ್ತರಿಗೆ 18 ಲಕ್ಷಕ್ಕಿಂತಲೂ ಹೆಚ್ಚೂ ಮಿರ್ಚಿಗಳು ತಯಾರಾಗುತ್ತಿವೆ. ಭಕ್ತರಿಗೆ ಪ್ರಸಾದದಲ್ಲಿ ಮಿರ್ಚಿಗಳನ್ನು ಒದಗಿಸುವ ಸಂಕಲ್ಪವನ್ನು ಪೂಜ್ಯರು ಮಾಡಿದ್ದರಿಂದ ಪ್ರತಿವರ್ಷ ಮಾದಾಸೋಹದಲ್ಲಿ ಭಕ್ತರಿಗೆ ಮಿರ್ಚಿಗಳನ್ನು ನೀಡಲಾಗುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 