ಮೊರಾರ್ಜಿ ಶಾಲೆಗಳಿಂದ ಬಡ ವಿದ್ಯಾರ್ಥಿಗಳ ಕನಸು ಸಾಕಾರ: ಶಾಸಕ ರಾಜು ಕಾಗೆ..!

ಮೊರಾರ್ಜಿ ಶಾಲೆಗಳಿಂದ ಬಡ ವಿದ್ಯಾರ್ಥಿಗಳ ಕನಸು ಸಾಕಾರ: ಶಾಸಕ ರಾಜು ಕಾಗೆ..! Morarji schools are fulfilling the dreams of poor students: MLA Raju Kage..!

ಕಾಗವಾಡ 94 : ರಾಜ್ಯ ಸರ್ಕಾರ ಶಿಕ್ಷಣಕ್ಕೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದು, ಮೊದಲೆಲ್ಲ ಜಿಲ್ಲೆಗೊಂದು, ತಾಲೂಕಿಗೊಂದು ಇರುತ್ತಿದ್ದ ನವೋದಯ, ಮುರಾರ್ಜಿ ವಸತಿ ಶಾಲೆಗಳನ್ನು ಸರ್ಕಾರ ಇಂದು ಗ್ರಾಮೀಣ ಭಾಗದ ಹಳ್ಳಿ ಹಳ್ಳಿಗಳಲ್ಲಿಯೂ ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ಸಾಕಾರಗೊಳಿಸಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ  

ಅವರು ಶನಿವಾರ ದಿ. 30 ರಂದು ತಾಲೂಕಿನ ಐನಾಪೂರ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಮುರಾರ್ಜಿ ವಸತಿ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಪ್ರತಿಯೊಬ್ಬರಿಗೆ ಉಚಿತ ಶಿಕ್ಷಣ ನೀಡುವುದು ಯಾವುದೇ ಸರ್ಕಾರಗಳಿಂದ ಸಾಧ್ಯವಿಲ್ಲ. ರಾಜ್ಯದಲ್ಲಿ ಸಾಕಷ್ಟು ಮಠಗಳು ಮತ್ತು ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತೀವೆ. ತುಮಕೂರಿನ ಸಿದ್ದಗಂಗಾ ಮಠ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಠಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಪಡೆದುಕೊಂಡು, ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಸರ್ಕಾರವೂ ಕೂಡಾ ಗ್ರಾಮೀಣ ಭಾಗಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಇವುಗಳ ಲಾಭ ಪಡೆದುಕೊಂಡು, ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕೆಂದರು. 

ನಂತರ ಶಾಸಕ ರಾಜು ಕಾಗೆ ಅವರು, ಕ್ಷೇತ್ರದ ಕಲವಗುಡ್ಡ, ಬಮ್ಮನಾಳ, ಹಣಮಾಪೂರ, ಕಲೂತಿ, ತಾಂವಶಿ ಗ್ರಾಮಗಳಲ್ಲಿ ವಿವಿಧ ಸಮುದಾಯ ಭವನಗಳ ನಿರ್ಮಾಣ ಹಾಗೂ ಸಂಬರಗಿ ಗ್ರಾಮದಲ್ಲಿ ಜೆಜೆಎಂ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದರು.   

ಈ ಸಮಯದಲ್ಲಿ ಕವಲಗುಡ್ಡದ ಸಿದ್ದಾಶ್ರಮದ ಪಪೂ ಅಮರೇಶ್ವರ ಮಹಾರಾಜರು, ಎಎಇ ವೀರಣ್ಣಾ ವಾಲಿ, ಜ್ಯೋತಿ ನಗಾರೆ, ಮೊರಾರ್ಜಿ ಶಾಲೆಯ ಪ್ರಾಚಾರ್ಯ ಯಲ್ಲಪ್ಪಾ ಕೊಂಗಂಟ್ಟಿ, ಗೀರೀಶ ಕಲಮಡಿ, ಮುಖಂಡರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜೀವ ಭಿರಡಿ, ಕುಮಾರ ಜಯಕರ, ಅರವಿಂದ ಕಾರ್ಚಿ, ವಿನಾಯಕ ಬಾಗಡಿ, ರಾವಸಾಹೇಬ ಐಹೊಳೆ, ಬಸನಗೌಡಾ ಪಾಟೀಲ (ಬಮ್ಮನಾಳ), ಗುರು ಮಡಿವಾಳ, ಮಮತಾ ಕನ್ಸಟ್ರಕ್ಷನ್‌ನ ಗುತ್ತಿಗೆದಾರ ವಾಸುದೇವ, ಗುತ್ತಿಗೆದಾರಾದ ತಿಪ್ಪಣ್ಣಾ ಬಜಂತ್ರಿ, ಎಸ್‌.ಬಿ. ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.