ಮೋದಿಗೆ ಪಾಕ್ ಬಗ್ಗೆ ತಂತ್ರಗಾರಿಕೆ ಇಲ್ಲ: ರಾಹುಲ್
ಹೊಸದಿಲ್ಲಿ 24: 'ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ವಿಷಯದಲ್ಲಿ ಆಳವಾದ ಆಲೋಚನೆಯ ತಂತ್ರಗಾರಿಕೆಯನ್ನು ಅನುಸರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಆರೋಪಿಸಿದ್ದಾರೆ.
ಒಂದು ದಿನದ ಹಿಂದಷ್ಟೆ ರಾಹುಲ್ ಗಾಂಧಿ, "ಬಿಜೆಪಿ ಮತ್ತು ಆರ್ಎಸ್ಎಸ್ ಭಾರತದಲ್ಲಿ ದ್ವೇಷ ಹರಡುತ್ತಿವೆ' ಎಂದು ಆರೋಪಿಸುವ ಮೂಲಕ ವಿವಾದವೆಬ್ಬಿಸಿದ್ದರು.
ಲಂಡನ್ನ 'ಅಂತಾರಾಷ್ಟ್ರೀಯ ವ್ಯೂಹಗಾರಿಕೆ ಅಧ್ಯಯನ ಕೇಂದ್ರ ದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕ್ ವಿಷಯದಲ್ಲಿ ಯಾವುದೇ ಕ್ರಮಬದ್ಧ ತಂತ್ರಗಾರಿಕೆ ಇದ್ದಂತೆ ಕಾಣುವುದಿಲ್ಲ. ಪಾಕಿಸ್ಥಾನದ ಜತೆಗೆ ವ್ಯವಹರಿಸುವುದು ತುಂಬ ಕಷ್ಟ, ಏಕೆಂದರೆ ಅಲ್ಲಿ ಯಾವುದೇ ಒಂದು ಸಮ್ಮಿಳಿತ ಅಧಿಕಾರ ಪಾರಮ್ಯದ ಕೇಂದ್ರ ಎಂಬುದಿಲ್ಲ. ಆದುದರಿಂದ ಪಾಕಿಸ್ಥಾನದವರು ತಾವೇ ಅಂತಹ ಸಮ್ಮಿಳಿತ ಪರಮೋಚ್ಚ ಸಂರಚನೆಯನ್ನು ರೂಪಿಸಿಕೊಂಡು ಮುಂದೆ ಬರುವುದನ್ನು ನಾವು ಕಾಯಬೇಕಾಗುತ್ತದೆ' ಎಂದು ಹೇಳಿದರು.
ಭಾರತ - ಚೀನ ಸೇನೆಯ ನಡುವಿನ ಸುದೀರ್ಘ ಮುಖಾಮುಖೀಗೆ ಕಾರಣವಾದ ಡೋಕ್ಲಾಂ ವಿಷಯವನ್ನು ಕೂಡ ಕೇಂದ್ರ ಸರಿಯಾಗಿ ನಿರ್ವಹಿಸಿಲ್ಲ ಎಂದು ರಾಹುಲ್ ಮೋದಿ ಸರಕಾರವನ್ನು ಟೀಕಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 