ಹೆಸರಿಗಷ್ಟೇ ಸಂಚಾರಿ ಚಿಕಿತ್ಸಾಲಯ : ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಮರಿಚಿಕೆ

ಹೆಸರಿಗಷ್ಟೇ ಸಂಚಾರಿ ಚಿಕಿತ್ಸಾಲಯ : ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಮರಿಚಿಕೆ  Mobile clinic in name only: Health facilities for workers a mirage

ಕಂಪ್ಲಿ 09:  ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ದೃಷ್ಠಿಯಿಂದ ಸಂಚಾರಿ ಚಿಕಿತ್ಸಾಲಯ ಬಸ್ ಪ್ರಾರಂಭಿಸಿದೆ. ಆದರೆ, ಕಂಪ್ಲಿ ತಾಲೂಕಿನಲ್ಲಿ ಬಹಳಷ್ಟು ಕಾರ್ಮಿಕರಿಗೆ ಸಂಚಾರಿ ಚಿಕಿತ್ಸೆ ಸಮರ​‍್ಕವಾಗಿ ದೊರೆಯುತ್ತಿಲ್ಲ. ಕಾರ್ಮಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲೆಂದು ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಸಂಚಾರ ಚಿಕಿತ್ಸಾಲಯ ಅಷ್ಟಕಷ್ಟೇ ಎಂಬಂತಾಗಿದೆ.  ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ಸೇರಿದಂತೆ ಒಟ್ಟಾರೆ ಸುಮಾರು 6 ಸಾವಿರಕ್ಕೂ ಹೆಚ್ಚು ವಿವಿಧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅತಿ ಹೆಚ್ಚಾಗಿ ಬಡ ಹಾಗೂ ಮಾಧ್ಯಮ ವರ್ಗದ ಕಾರ್ಮಿಕರಿದ್ದಾರೆ. ಇಲ್ಲಿನ ಕಾರ್ಮಿಕರಿಗೆ ಉಚಿತವಾಗಿ ಸಿಗಬೇಕಾದ ಚಿಕಿತ್ಸಾ ಸೌಲಭ್ಯವು ಮರಿಚಿಕೆಯಾಗಿದೆ. 

ಸಂಚಾರಿ ಚಿಕಿತ್ಸಾಲಯ ಬಸ್ ಕೇವಲ ಪ್ರಮುಖ ರಸ್ತೆಗಲ್ಳಿ ಮಾತ್ರ ಸಂಚರಿಸಿ, ಮೈಕ್ ಅನೌನ್ಸ್‌ ಮಾಡಿ ತೆರಳುವುದು ಸಾಮಾನ್ಯವಾಗಿದೆ. ಇಲ್ಲಿನ ಕಟ್ಟಡ ಹಾಗೂ ಇತರೆ ನಿರ್ಮಾಣದಲ್ಲಿ ತೊಡಗಿರುವ ಸ್ಥಳಕ್ಕೆ ಸಂಚಾರಿ ಬಸ್ ಬಾರದೇ, ಎಲ್ಲೆಂದರಲ್ಲಿ ನಿಲ್ಲಿಸಿ, ಬೇಕಾಬಿಟ್ಟಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಬಲವಾಗಿ ಕೇಳಿ ಬರುತ್ತಿದೆ. ಇಲ್ಲಿನ ಸಂಚಾರಿ ಬಸ್ನಲ್ಲಿ ಜ್ವರ, ತಲೆನೋವು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗೆ ಸರಿಯಾದ ಓಷಧಿಗಳಿಲ್ಲ. ಮತ್ತು ತಜ್ಞ ವೈದ್ಯರು ಸಹ ಇಲ್ಲದಂತಾಗಿದೆ. 

ಸಂಚಾರಿ ಬಸ್ ಗ್ರಾಮೀಣ ಭಾಗಕ್ಕೆ ಬಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆರೋಗ್ಯ ತಪಾಸಣೆ ಮಾಡುವ ಜೊತೆಗೆ ಸರಿಯಾಗಿ ಕಾರ್ಮಿಕರ ತಪಾಸಣೆ ಮಾಡದೇ, ಜಿಲ್ಲಾ ನಗರಕ್ಕೆ ತೆರಳುತ್ತಿದೆ. ಇದರಿಂದ ಇಲ್ಲಿನ ಕಾರ್ಮಿಕರಿಗೆ ಆರೋಗ್ಯ ಸೇವೆ ದೊರಕದಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ ಸಂಚಾರ ಮುಖ್ಯರಸ್ತೆಗೆ ಮಾತ್ರ ಸೀಮಿತವಾಗಿದೆ. ಸರ್ಕಾರ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ನೀಡುವ ಯೋಜನೆ ಹಳ್ಳ ಹಿಡಿಯುವತ್ತಾ ಸಾಗಿದೆನಾ ಎಂಬ ಅನುಮಾನ ಮೂಡಿದೆ. ಸರ್ಕಾರದ ಸೌಲಭ್ಯಗಳನ್ನು ಸಮರ​‍್ಕವಾಗಿ ತಲುಸುವ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ ಅತಿಮುಖ್ಯವಾಗಿದ್ದು, ಕೆಲ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಗೆ ಸೌಲಭ್ಯಗಳು ಹಳ್ಳ ಹಿಡಿಯುತ್ತಿವೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕಾರ್ಮಿಕರಿಗೆ ಆರೋಗ್ಯ ಸೌಲಭ್ಯವನ್ನು ಸಕಾಲದಲ್ಲಿ ಕಲ್ಪಿಸಲು ಕ್ರಮವಹಿಸಬೇಕೆಂಬುದು ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕ ನಿರ್ಮಾಣ ಸಂಘದ ದೇವಲಾಪುರ ಗ್ರಾಮ ಘಟಕ ಅಧ್ಯಕ್ಷ ಕಾನೀರು ಮಲ್ಲೆಪ್ಪ, ಕಾರ್ಯದರ್ಶಿ ಹೆಚ್‌.ಪರಶುರಾಮ, ಉಪಾಧ್ಯಕ್ಷ ಕಾಡಳ್ಳಿ ಬಸವರಾಜ, ಖಜಾಂಚಿ ಗೊರವರ ನಾಗರಾಜ ಸೇರಿದಂತೆ ಕಾರ್ಮಿಕರ ಹಕ್ಕೋತ್ತಾಯವಾಗಿದೆ.