ಖಾಸಗಿ ಬಡಾವಣೆ ನಿರ್ಮಾಣಕ್ಕೆ ಕಡಿವಾಣ ಹಾಕಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಸೂಚನೆ

ಹಾವೇರಿ: ಜು.04:  ಅನಧಿಕೃತ ಖಾಸಗಿ ಬಡಾವಣೆಗಳ ರಚನೆಗೆ ಕಡಿವಾಣಹಾಕಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಹೊಸ ನಿವೇಶನ ರಚಿಸಿ ವಿತರಣೆಗೆ ಕ್ರಮವಹಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಅವರು ಸೂಚನೆ ನೀಡಿದರು.

ಹಾವೇರಿ ನಗರಸಭೆ ಸಭಾಂಗಣದಲ್ಲಿ ಶನಿವಾರ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ರೈತರ ಸಹಭಾಗಿತ್ವದಲ್ಲಿ ಹೊಸ ನಿವೇಶ ರಚನೆಯಾಗಬೇಕು. ರೈತರಿಗೆ ಶೇ.50 ಹಾಗೂ ಪ್ರಾಧಿಕಾರಕ್ಕೆ ಶೇ.50ರ ಹಂಚಿಕೆ ಪ್ರಮಾಣದಲ್ಲಿ ಜಮೀನು ಪಡೆದು ನಿವೇಶನವಾಗಿ ಅಭಿವೃದ್ಧಿಪಡಿಸಿ ವಿತರಣೆಗೆ ಕ್ರಮವಹಿಸಬೇಕು. ಈ ಕೆಲಸ ತ್ವರಿತವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಂಪನ್ಮೂಲ ಕ್ರೋಢೀಕರಣ ಕಾಮಗಾರಿಗಳಿಗೆ ಒತ್ತು ನೀಡಬೇಕು. ಸಿ.ಎ ಸೈಟ್ಗಳನ್ನು ತ್ವರಿತವಾಗಿ ವಿಲೇವಾರಿಮಾಡಬೇಕು. ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. 

ಖಾಸಗಿ ಬಡಾವಣೆಗಳ ನಿಮರ್ಾಣದಿಂದ ಸಕರ್ಾರಕ್ಕೆ ಆದಾಯವೂ ಕಡಿಮೆ, ಜನರಿಗೆ ಸಮಸ್ಯೆಯೂ ಹೆಚ್ಚು. ಮೂಲಭೂತ ಸೌಕರ್ಯ ಕಲ್ಪಿಸುವುದು ಕಷ್ಟ. ಇದರ ಬದಲಾಗಿ ಸಕರ್ಾರದ ವತಿಯಿಂದಲೇ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ನಿವೇಶನ ರಚನೆ ಕಾರ್ಯಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ರಾಣೇಬೆನ್ನೂರು ಹಾಗೂ ಹಾವೇರಿ ನಗರದ ಒಳಚರಂಡಿ ಕಾಮಗಾರಿಗಳು ಹಾಗೂ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತಂತೆ ಹಾವೇರಿ ಶಾಸಕರಾದ ನೆಹರು ಓಲೇಕಾರ ಹಾಗೂ ರಾಣೇಬೆನ್ನೂರ ಶಾಸಕರಾದ ಅರುಣಕುಮಾರ ಗುತ್ತೂರ ಅವರು ಸಭೆಯಲ್ಲಿ ತೀವ್ರ ಅಸಮಾಧಾನವ್ಯಕ್ತಪಡಿಸಿ ಕೆಲವೆಡೆ ಕಳಪೆಕಾಮಗಾರಿಗಳು ನಡೆಯುತ್ತಿರುವ ಕುರಿತಂತೆ ಸಚಿವರ ಗಮನಸೆಳೆದರು.

       ಈ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಶಾಸಕರನ್ನು ಸ್ಥಳಕ್ಕೆ ಕರೆದುಕೊಂಡುಹೋಗಿ ಲೋಪವನ್ನು ಸರಿಪಡಿಸಬೇಕು. ಈ ಕುರಿತಂತೆ ಶಾಸಕರನ್ನು ಆಹ್ವಾನಿಸಿ ಪ್ರತ್ಯೇಕ ಸಭೆ ನಡೆಸಬೇಕು. ಇದೇ ಆಗಸ್ಟ್ 15ರೊಳಗಾಗಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಆಗಸ್ಟ್ 15ಕ್ಕೆ ರಾಣೇಬೆನ್ನೂರಿನ ಕುಡಿಯುವ ನೀರು ಮತ್ತು ಯುಜಿಡಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹಾವೇರಿ ನಗರದ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ವೇಳೆಗೆ ಕಾಮಗಾರಿ ಸಿದ್ಧವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜುರಗಿಸಲಾಗುವುದು ಎಂದು ಎಚ್ಚರಿಸಿದರು.

        ಶಿಗ್ಗಾಂವ ನಗರದ ಯುಜಿಡಿ ಯೋಜನೆ ಹಾಗೂ ಸವಣೂರ ಪಟ್ಟಣದ ಕುಡಿಯುವ ನೀರಿನ ಯೋಜನೆ, ಹಿರೇಕೆರೂರು ಪಟ್ಟಣದ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆಯ ಪರಿಷ್ಕೃತ ಯೋಜನೆ, ಶಿಗ್ಗಾಂವ, ಸವಣೂರ, ಬಂಕಾಪುರ ಕುಡಿಯುವ ನೀರಿನ ಯೋಜನೆಗೆ ಪಯರ್ಾಯ ಜಲಾಶಯ ನಿಮರ್ಾಣ, ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಕುರಿತಂತೆ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು.

       ಜಿಲ್ಲೆಯ ನಗರ ಪ್ರದೇಶಗಳಲ್ಲಿ ಯು.ಜಿ.ಡಿ. ಕಾಮಗಾರಿ ಅನುಷ್ಠಾನಕ್ಕೆ ನಿವೇಶನ ಸಮಸ್ಯೆಗಳು ತಕಾರರುಗಳಿ ಇದ್ದರೆ ಜಿಲ್ಲಾಧಿಕಾರಿಗಳನ್ನು ಸಂಪಕರ್ಿಸಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಾಗೂ ಮಂದಗತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ವಿಳಂಬಕ್ಕೆ ಅವಕಾಶ ನೀಡಬಾರದು. 

ಮೊದಲಬಾರಿ ಜಿಲ್ಲೆಯಲ್ಲಿ ಸಭೆ ನಡೆಸಿರುವುದರಿಂದ ನಿಮಗೆ ಕಾಲಾವಕಾಶ ನೀಡಲಾಗಿದೆ. ದಾವಣಗೆರೆ ನನ್ನ ಉಸ್ತುವಾರಿ ಜಿಲ್ಲೆಯಾಗಿದ್ದು, ಪಕ್ಕದ ಹಾವೇರಿಗೆ ಯಾವುದೇ ಸಂದರ್ಭದಲ್ಲಿ ಬಂದು ವೀಕ್ಷಣೆಮಾಡಬಹುದು. ಈ ಸಂದರ್ಭದಲ್ಲಿ ನಾನು ಹೇಳಿದ ಕೆಲಸವಾಗದಿದ್ದರೆ ತಾವು ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಪೌರ ಕಾಮರ್ಿಕರ ಸಮಸ್ಯೆಗಳನ್ನು ಬಗೆಹರಿಸಿ, ಸ್ಥಳೀಯವಾಗಿ ನಿಧರ್ಾರಕೈಗೊಂಡು ಘಟನೋತ್ತರ ಅನುಮೋದನೆಗೆ ಸಕರ್ಾರಕ್ಕೆ ಕಳುಹಿಸಿದರೆ ಅದನ್ನು ಬಗೆಹರಿಸಲಾಗುವುದು ಎಂದು ಸೂಚನೆ ನೀಡಿದರು.

        ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್.ವಾಸಣ್ಣ ಪ್ರಾಧಿಕಾರದ ಚಟುವಟಿಕೆಗಳ ಕುರಿತಂತೆ ವಿವರಿಸಿದರು.

ಶಾಸಕರಾದ  ನೆಹರು ಓಲೇಕಾರ ಹಾಗೂ ಅರುಣಕುಮಾರ ಗುತ್ತೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ನಗರಸಭೆ ಆಯುಕ್ತರಾದ ಬಸವರಾಜ ಜಿದ್ದಿ, ಡಾ.ಮಹಾಂತೇಶ ಹಾಗೂ ಒಳಚರಂಡಿ ಮಂಡಳಿ, ನಗರ ನೀರು ಸರಬರಾಜು ಮಂಡಳಿಯ ವಿವಿಧ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.