ಇಬ್ಬರು ಪುರುಷರು ಹಾಗೂ ಓರ್ವ ಯುವತಿ ಕಾಣೆ
Men and a young woman are missing
ಹಾವೇರಿ 28 : ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಣಕೂರ ಗ್ರಾಮದ 42 ವರ್ಷದ ಹಾಲೇಶ ನಿಂಗಪ್ಪ ಹೊಸಮನಿ 1 ಜನವರಿ 2022 ರಂದು, ತುಮ್ಮಿನಕಟ್ಟಿ ಗ್ರಾಮದ 26 ವರ್ಷದ ಪುಟ್ಟೇಶ ಅ ಪುಟ್ಟಸ್ವಾಮಿ ಲಕ್ಷ್ಮಣ ಮಿರಾಲಿ 18 ಡಿಸೆಂಬರ್ 2024 ರಂದು ಹಾಗೂ ಕುಸಗೂರ ಗ್ರಾಮದ 20 ವರ್ಷಧ ಯುವತಿ ಗಂಗವ್ವ ಸುಂಕಪ್ಪ ದುರುಮುರಗೇರ ಇವಳು 6 ಸೆಪ್ಟೆಂಬರ್ 2025 ರಂದು ಮನೆಯಿಂದ ಹೋದವರು ಕಾಣೆಯಾಗಿರುವುದಾಗಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹಾಲೇಶ ನಿಂಗಪ್ಪ ಹೊಸಮನಿ 5.5 ಅಡಿ ಎತ್ತರ, ಸದೃಢಮೈಕಟ್ಟು, ಗೋದಿಮೈಬಣ್ಣ, ದುಂಡು ಮುಖಹೊಂದಿದ್ದು, ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾನೆ. ಪುಟ್ಟೇಶ ಅ ಪುಟ್ಟಸ್ವಾಮಿ ಲಕ್ಷ್ಮಣ ಮಿರಾಲಿ 5.2 ಅಡಿ ಎತ್ತರ, ಬಡಕಲು ಮೈಕಟ್ಟು, ಕಪ್ಪು ಮೈಬಣ್ಣ ಅಗಲ ಮುಖಹೊಂದಿದ್ದು, ಬೂದು ಬಣ್ಣದ ಶರ್ಟ, ಗ್ರೇ ಕಲರ್ ಸ್ವೇಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಗಂಗವ್ವ ಸುಂಕಪ್ಪ ದುರುಮುರಗೇರ 4.5 ಅಡಿ ಎತ್ತರ, ಗಿಡ್ಡಮೂಗು, ಎಡಗೈ ಮೊಣಕೈ ಕೆಳಭಾಗದಲ್ಲಿ ಇಂಗ್ಲೀಷ್ನಲ್ಲಿ ಂಠಿಠಿಚಿರಿ ಅಂತಾ ಹಚ್ಚೆ ಗುರುತು ಇದೆ.
ಈ ಮೇಲ್ಕಂಡ ಪುರುಷ ಹಾಗೂ ಯುವತಿರ ಮಾಹಿತಿ ಲಭ್ಯವಾದಲ್ಲಿ ಹಲಗೇರಿ ಪೊಲೀಸ್ ಠಾಣೆ ಆರಕ್ಷಕ ಉಪ ನೀರೀಕ್ಷಕ ದೂ.08373-252333, ಮೊ.9480804554, ಕುಮಾರಪಟ್ಟಣಂ ಆರಕ್ಷಕ ವೃತ್ತ ನೀರೀಕ್ಷಕರ ದೂ.08373-266404, ಮೊ.9480804536, ರಾಣೇಬೆನ್ನೂರು ಉಪ ವಿಭಾಗ ಆರಕ್ಷಕ ಉಪ ಅಧೀಕ್ಷಕ ದೂ.08373-266311 ಮೊ.9480804521 ಸಂಪರ್ಕಿಸಬಹುದೆಂದು ಹಲಗೇರಿ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 