ಝಳಕಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಪ್ರಗತಿ ಪರೀಶೀಲನೆ ಸಭೆ

ಝಳಕಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಪ್ರಗತಿ ಪರೀಶೀಲನೆ ಸಭೆ Meeting to review progress of Pancha Guarantee Scheme in Jhalaki

ಇಂಡಿ 19 : ತಾಲೂಕಿನ ಝಳಕಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಸಭಾ ಭವನದಲ್ಲಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ  ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆ ಹಾಗೂ ಅನುಷ್ಠಾನ ಸಮಿತಿಯ ನಡೆ ಫಲಾನುಭಾವಿಗಳ ಮನೆ ಕಡೆ, ಮನೆಗೆ 5 ಗ್ಯಾರಂಟಿ ಹಾಗೂ ಮನೆಯ ಮುಂದೆ ರಂಗೋಲಿ ಬಿಡಿಸುವ ಕಾರ್ಯಕ್ರಮ ಜರುಗಿಸಲಾಯಿತು. ಸದಸ್ಯ ಕಾರ್ಯದರ್ಶಿ ಹಾಗೂ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಭೀಮಾಶಂಕರ ಕನ್ನೂರ ರವರು ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಸ್ವಾಗತ ಕೋರಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸಾವಿರ ದಿನಗಳನ್ನು ಪೂರೈಸಿದ ಪಂಚ ಗ್ಯಾರಂಟಿ ಯೋಜನೆಗಳುಮನೆ ಮನ ಬೆಳಗುತ್ತಿರುವ ಗೃಹ ಜ್ಯೋತಿ. ಗೃಹಲಕ್ಷ್ಮಿ ಯುವನಿಧಿ ಅನ್ನ ಭಾಗ್ಯ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಭಾಗ್ಯ ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ  ಪ್ರಶಾಂತ ಕಾಳೆ ರವರು ಮಾತನಾಡಿ  ಗ್ಯಾರಂಟಿ ಯೋಜನೆಗಳು ಕರುನಾಡಿನ ಪಾಲಿಗೆ ಕೇವಲ ಭರವಸೆಯಲ್ಲ ಕೋಟ್ಯಂತರ ಮಹಿಳೆಯರ ಪಾಲಿನ ಸ್ವಾಭಿಮಾನ.  ತಮ್ಮ ಕಾಲ ಮೇಲೆ ನಿಲ್ಲುವ ಸ್ವಾವಲಂಬನೆಯ ತುಡಿತವುಳ್ಳವರ ಬದುಕಿನ ಜೀವಾಮೃತ. ಯುವ ಸಮೂಹದ ಪಾಲಿಗೆ ಉತ್ತೇಜಕ. ಶೋಷಿತ , ಹಿಂದುಳಿದ , ಎಲ್ಲ ಜಾತಿ, ವರ್ಗಗಳಲ್ಲೂ  ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ನೀಡಿದ ಬದುಕಿನ ಭರವಸೆಯೇ ಈ ಪಂಚ ಗ್ಯಾರಂಟಿ ಯೋಜನೆ ಆಗಿವೆ ಎಂದು ಮಾತನಾಡಿದರು. ಇಂಡಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ  ಪರೀಕ್ಷೆಯ ಇರುವುದರಿಂದ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಂಜೆ ಸಮಯದಲ್ಲಿ 30 ದಿನಗಳ ವರೆಗೆ 1 ಘಂಟೆ ಸಾಧ್ಯವಾದಲ್ಲಿ ವಿದ್ಯುತ್ ಕೊಡಲು ಂಘಇ  ರವರಿಗೆ ಸೂಚಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ​‍್ಕವಾಗಿ ಹಾಗೂ ಪರಿಣಾಮಕಾರಿಯಾಗಿ ಜನರಿಗೆ ತಲುಪುವಂತೆ ಎಲ್ಲಾ ಅಧಿಕಾರಿಗಳು ಕಾರ್ಯ ಪ್ರವೃತ್ತಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಗ್ರಾಮ ಮಟ್ಟದಲ್ಲಿ ಜಾಗೃತಿ ಹೆಚ್ಚಿಸುವುದರ ಜೊತೆಗೆ ಜನರಿಂದ ಬಂದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು, ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅತ್ಯಗತ್ಯ ಎಂದು ತಿಳಿಸಿದರು. ತದನಂತರ ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷರು ಸದ್ಯಸ್ಯರು  ತಾಲೂಕ ಮಟ್ಟದ ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಗಳ ಕುರಿತಾಗಿ ಜನ ಜಾಗೃತಿ ಅಭಿಯಾನದ ಅಂಗವಾಗಿ ರಂಗೋಲಿ ಚಿತ್ರಗಳನ್ನ ವೀಕ್ಷಿಸಿದರು. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ನೀಡಿ ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರುಗಳಾದ ಮಹೇಶ ಹೊನ್ನಬಿಠಗಿ  ಸಂಜಕುಮಾರ್  ನಾಯ್ಕೊಡಿ  ಸತೀಶ  ಹತ್ತಿ  ರ್ಮಲ ತಳಕೇರಿ  ಶೈಲಜಾ ಜಾಧವ  ಶಶಿಕುಮಾರ ಮಠ ಸಿದ್ದು ಕಟ್ಟಿಮನಿ ಪ್ರಭು  ಕುಂಬಾರ  ಸಂಕೇತ  ಜೋಶಿ , ಮಲೇಶಿ ಬೋಸಗಿ ರುದ್ರಗೌಡ  ಆಳಗೊಂಡ  ಭೀಮರಾಯ ಮೇತ್ರಿ , ಸೋಮಣ್ಣ  ಪ್ರಚಂಡಿ ಅಜಿತ ಜೀರಗಿ, ಝಳಕಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಲಕ್ಷ್ಮಣ ಪಾಟೀ , ತಾಲೂಕಿನ ಎಲ್ಲ  ಇಲಾಖೆಗಳ ಅಧಿಕಾರಿಗಳು ತಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.