ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಇಪಿಎಸ್ 95 ಪಿಂಚಣಿ ಯೋಜನೆಯ ಕುರಿತು ಸಭೆ

ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ  ಇಪಿಎಸ್ 95 ಪಿಂಚಣಿ ಯೋಜನೆಯ ಕುರಿತು ಸಭೆ Meeting on EPS 95 Pension Scheme at Sri Gangaparameshwari Community Hall

ಗಂಗಾವತಿ 25:  ಇವರಿಗೆ, ಪತ್ರಿಕಾ ಪ್ರಕಟಣೆ ಕೃಪೆಗಾಗಿ ಮಾನ್ಯರೇ,  ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ  ದಿನಾಂಕ 26.02.26 ರಂದು ಮರಳಿ ಗ್ರಾಮದ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ  ಇಪಿಎಸ್ 95 ಪಿಂಚಣಿ ಯೋಜನೆಯ ಕುರಿತು ಸಭೆ ಜರುಗಲಿದೆ ಈ ಸಭೆಯಲ್ಲಿ ಇಪಿಎಸ್ 95 ಕಾರ್ಮಿಕರ ಬೇಡಿಕೆಗಳು  ಕನಿಷ್ಠ ರೂ. 75002. ತುಟ್ಟಿ ಭತ್ಯೆ 3. ಉಚಿತ ವೈದ್ಯಕೀಯ ಸೌಲಭ್ಯ 4. ವಿಧವೆಯರಿಗೆ 100ಅ ಪಿಂಚಣಿ 5. ಈ ಯೋಜನೆ ವಂಚಿತರಿಗೆ ಕನಿಷ್ಠ ರೂ.5000 ಪಿಂಚಣಿ.ಈ ಎಲ್ಲಾ ಬೇಡಿಕೆಗಳಿಗಾಗಿ ಇಕಖ 95 ಪಿಂಚಣಿ ಹೆಚ್ಚಳ ಹೋರಾಟ ನಿರಂತರವಾಗಿದ್ದು, ಕೇಂದ್ರದ ಸರಕಾರದ ಮಟ್ಟದಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಕಂಡು ಬರುತ್ತಿದ್ದರೂ ಕೂಡಾ, ಒಂದು ವೇಳೆ ಈಗಿನ ವಿಳಂಬ ನೀತಿ ಪರಿಸ್ಥಿತಿಯೇ ಮುಂದುವರೆದರೆ, 

ಈ ಮೊದಲೇ ನಿರ್ಧರಿಸಿದಂತೆ ದೆಹಲಿಯ ಜಂತರ ಮಂತರ್ ನಲ್ಲಿ ದಿನಾಂಕ 9-3-2026 ರಿಂದ 11-3-2026 ರವರೆಗೆ ನಡೆಯುವ ಬೃಹತ್ ಪ್ರತಿಭಟನೆಯ ಪೂರ್ವಬಾವಿ ಸಭೆಯಾಗಿದೆ.ಈ ಸಭೆಯಲ್ಲಿ ರಾಜ್ಯ ಸಂಘಟಕರಾದ ವೀರಕುಮಾರ ಗಡಾದ, ರಾಜ್ಯ ಕಾರ್ಯಾಧ್ಯಕ್ಷರು, ಅನೀಲ್ ಇನಾಮದಾರ ರಾಜ್ಯ ಐಟಿ ಸಹ ಸಂಚಾಲಕರು, ಚನ್ನಬಸಯ್ಯ ರಾಜ್ಯ ಉಪಾಧ್ಯಕ್ಷರು ಹಾಗೂ ಶ್ಯಾಮೀದ್ ಕುಷ್ಟಗಿ, ಜಿಲ್ಲಾ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಈ ಇಪಿಎಸ್ 95 ಯೋಜನೆಯಲ್ಲಿ ಸಾರಿಗೆ ಇಲಾಖೆ, ಸಹಕಾರ ಇಲಾಖೆ, ಜೀವವಿಮಾ ನಿಗಮದ ನಿವೃತ್ತ ಕಾರ್ಮಿಕರು ಬರಲಿದ್ದು ಅವರಿಗೂ ಕೂಡ ಈ ಸಭೆಗೆ ಬರಲು ಆಮಂತ್ರಣ ನೀಡಲಾಗಿದೆ. ದಯವಿಟ್ಟು ತಾವು ಈ ಸಭೆಗೆ ಆಗಮಿಸಿ ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಮನವಿ ಮಾಡುತ್ತೇನೆ. ಧನ್ಯವಾದಗಳೊಂದಿಗೆ,ತಮ್ಮ ರಮೇಶ್ ಕುಲಕರ್ಣಿ ಮರಳಿ*ನಿವೃತ್ತ ಕಾರ್ಮಿಕ ಗಂಗಾವತಿ ಸಕ್ಕರೆ ಕಾರ್ಖಾನೆ ನಿಯಮಿತ, ಪಗತಿನಗರ ಸಾಕಿನ ಮರಳಿ.