ಮನೋಛಾಯ.ಎಸ್ ಗೆ ಪಿಎಚ್‌ಡಿ ಪದವಿ

ಮನೋಛಾಯ.ಎಸ್ ಗೆ ಪಿಎಚ್‌ಡಿ ಪದವಿ Manochaya.S gets PhD degree

ಬಳ್ಳಾರಿ 15:  ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಮನೋಛಾಯ.ಎಸ್ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ. ವಿವಿಯ  ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ.ಕೃಷ್ಣವೇಣಿ ಆರ್‌. ಅವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ದ ಇನ್ ವೈವೋ ಮಾಸ್ ಮಲ್ಟಿಪ್ಲಿಕೇಶನ್ ಆಫ್ ಎಂಟಮೋಪ್ಯಾಥೋಜೆನಿಕ್ ನೇಮಟೋಡ್, ಹೆಟಿರೊರಾ​‍್ಯಬ್‌ಡೈಟಿಸ್ ಇಂಡಿಕಾ ಟುವರ್ಡ್ಸ್‌ ಡೆವೆಲಪ್‌ಮೆಂಟ್ ಆಫ್ ಪೊಟೆಂಟ್ ಬಯೋಕಂಟ್ರೋಲ್ ಏಜೆಂಟ್‌” ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿದ ಹಿನ್ನಲೆಯಲ್ಲಿ ಪಿಎಚ್‌ಡಿ ನೀಡಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.