ಮಲ್ಲಿಕಾರ್ಜುನ ಮಗದುಮ್ ಅಧಿಕಾರ ಸ್ವೀಕಾರ

ಮಲ್ಲಿಕಾರ್ಜುನ ಮಗದುಮ್ ಅಧಿಕಾರ ಸ್ವೀಕಾರ Mallikarjuna Magadum assumes office

ಅಥಣಿ.30 : ಲೋಕೋಪಯೋಗಿ ಇಲಾಖೆಯ ಅಥಣಿ ಉಪ ವಿಭಾಗದ ಪ್ರಭಾರಿ ಸಹಾಯಕ  ಕಾರ್ಯ ಪಾಲಕ ಅಭಿಯಂತರಾಗಿ  ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಮಗದುಮ್ ಇವರಿಗೆ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು,  ಇಲಾಖಾ ಸಿಬ್ಬಂದಿ, ಸರಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಶುಭ ಹಾರೈಸಿದರು.       

ಲೋಕೋಪಯೋಗಿ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಮಗದುಮ್ ಈ ಮೊದಲು ಜಿಲ್ಲಾ ಪಂಚಾಯತನಲ್ಲಿಯೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.       

ಅಧಿಕಾರ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಮಗದುಮ್, ಲೋಕೋಪಯೋಗಿ ಇಲಾಖೆಯ ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವೆ ಎಂದರು. ಜನ ಪ್ರತಿನಿಧಿಗಳ ಹಾಗೂ  ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದ ಅವರು ಈಗಷ್ಟೇ ನಿವೃತ್ತರಾದ ಜಯಾನಂದ ಹಿರೇಮಠರಿಗೆ ಸಹಕಾರ ನೀಡಿದಂತೆ ನನಗೂ ಸಹಕಾರ ನೀಡಿ ಎಂದು ಇಲಾಖೆಯ ಸಿಬ್ಬಂದಿ ವರ್ಗದಲ್ಲಿ ಮನವಿ ಮಾಡಿದರು.       

ಈ ಸಂದರ್ಭದಲ್ಲಿ ನಿವೃತ್ತ ಅಭಿಯಂತರ ಜಯಾನಂದ ಹಿರೇಮಠ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಮಾಜಿ ಅಧ್ಯಕ್ಷ ರಾಮ ಧರಿಗೌಡ, ಶಿವಲಿಂಗ ಹುಕ್ಕೇರಿ, ಎ.ಜಿ.ಮುಲ್ಲಾ, ಪ್ರವೀಣ ಪಾಟೀಲ, ಬಿ.ಎಸ್‌.ಬಿರಾದಾರ, ಎ.ಪಿ.ಗೌರಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.