ಬೆನಕನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ
Mallikarjuna Jatra Festival in Benakanahalli village
ಲೋಕದರ್ಶನ ವರದಿ
ತಾಂಬಾ 04: 12ನೇ ಶತಮಾನದ ಶರಣರು ಕಾಯಕ ಹಾಗೂ ದಾಸೋಹ ತತ್ವಗಳನ್ನು ಮನುಕುಲಕ್ಕೆ ನೀಡಿದ ಅಮುಲ್ಯ ರತ್ನಗಳು ನಾವು ಸತ್ಯ ನಿಷ್ಠೆ ಕಾಯಕ ದಾಸೋಹ ತತ್ವದ ಮುಖಾಂತರ ಸರ್ವರನ್ನು ಪ್ರೀತಿಯಿಂದ ಬದುಕುವ ದಾರಿಯನ್ನು ತೋರಿದ ಶರಣರ ಚಿಂತನೆಗಳು ನಮಗೆ ದಾರಿ ಧೀಪವಾಗಿವೆ ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.
ಬೆನಕನಹಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಮುತೈದೆಯರಿಗೆ ಉಡಿತುಂಬುವ ಹಾಗೂ ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ ಮಹಾಪುರಾಣದ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಧಾರ್ಮಿಕತೆಯನ್ನು ಬೆಳಿಸಿಕೊಂಡು ಹೊಗಲು ಇಂದಿನ ಯುವಪಿಳ್ಳಿಗೆ ಮುಂದಾಗಬೇಕಿದೆ. ಯಾವುದೆ ಕೇಲಸ ವೀರಲಿ ಕೀಳಾಗಿ ನೋಡದೆ ಕಾರ್ಯಗಳನ್ನು ಮಾಡಿದಾಗ ನೇಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದರು.
ಎಮ್.ಎಸ್.ಪೂಜಾರಿ ಮಾತನಾಡಿ ಭಾರತೀಯ ಸಂಸ್ಕೃತಿ ಉಳಿಸಿ ಬೇಳಿಸುವ ಕಾರ್ಯ ನಾವೆಲ್ಲರು ಮಾಡಬೇಕಾಗಿದೆ. ಇಂದು ನಮ್ಮ ಹೇಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದಿನ ಯುವಜನಾಂಗಕ್ಕೆ ನಮ್ಮ ಸಂಸ್ಕೃತಿ ಹೆಂತ್ತದ್ದು ಎಂಬುವದನ್ನು ತೊರಿಸಿ ಕೊಟ್ಟ ಗ್ರಾಮಸ್ಥರ ಕಾರ್ಯ ಶ್ಲಾಘನಿಯ ಎಂದರು.
ಪ್ರವಚನ ಕಾರರಾದ ಸಿದ್ದರಾಮ ಶಿವಯೋಗಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ರಾಜಶೇಖರ ಹೊಸಮನಿ, ಮಲ್ಲು ಹೊಸಮನಿ, ಕಾಸು ಹಚ್ಚಡದ, ಬೀರ್ಪ ಪೂಜಾರಿ, ಜಗು ಚಿಮ್ಮಗೊಳ, ಸಂಗಪ್ಪ ಅಂಕಲಗಿ, ಸಿ.ಕೆ.ಮಸಳಿ ಸೆರಿದಂತೆ ಮತ್ತಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 