ಶರಣ ಸಂಗಮ ಹಾಗೂ ಮಠದಂಗಳದಲ್ಲಿ ಮಹಾಮನೆ ೆ ಕಾರ್ಯಕ್ರಮ

Mahamane program at Sharan Sangam and Mathdangala

ಶರಣ ಸಂಗಮ ಹಾಗೂ ಮಠದಂಗಳದಲ್ಲಿ ಮಹಾಮನೆ ೆ ಕಾರ್ಯಕ್ರಮ

ಹಾವೇರಿ 04 :ಮನುಷ್ಯನ ಪರಿಪೂರ್ಣ ಬದುಕಿಗೆ ಪದವಿ, ಪಾವಿತ್ರ್ಯತೆ ಜೊತೆಗೆ ಹೃದಯ ವೈಶಾಲ್ಯತೆ ಸೃಷ್ಟಿಗೆ ಶರಣರ ವಚನಗಳು ಮಾರ್ಗಸೂಚಿ ಆಗಬಲ್ಲವು ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.ಶ್ರೀ ಮಠದ ಬಸವಕೇಂದ್ರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದಶರಣ ಸಂಗಮ ಹಾಗೂ ಮಠದಂಗಳದಲ್ಲಿ ಮಹಾಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ಸಂತೃಪ್ತ ಬದುಕಿಗೆ ಮೌಲ್ಯಗಳು ಅತಿ ಮುಖ್ಯ. ಅದೇ ಕಾರಣಕ್ಕೆ ಕವಿಗಳು, ಸಂತರು,ಮಹಾಂತರು, ವಿಜ್ಞಾನಿಗಳು ಮೌಲ್ಯಯುತ ಸಂದೇಶ ನೀಡಿರುವರು. ಬಸವಾದಿ ಶರಣರೂಕೂಡ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಅದ್ಭುತ ಸಂದೇಶ ನೀಡಿರುವರು.ಅವುಗಳ ಅನುಕರಣೆ ಇಂದಿನ ಅಗತ್ಯ ನಮ್ಮ ಬದುಕು ಭರವಸೆಗಳನ್ನುಬೆನ್ನೆತ್ತಬೇಕು ಹೊರತು ದುರಾಸೆಗಳನ್ನಲ್ಲ.ಸುಂದರ ಬದುಕು ನಮ್ಮದಾಗಿಸಲುವಚನಗಳು ದಾರೀದೀಪಗಳು.ಕಾರ್ಯಕ್ರಮ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿಸಿದರು ಶಿಕ್ಷಕ ಮಾಲತೇಶ ನಾಯ್ಕೋಡ ಉಪನ್ಯಾಸ ನೀಡಿದರು ಶರಣರ ಸಂದೇಶಗಳನ್ನು ಅಳವಡಿಸಿಕೊಂಡ ಕುಟುಂಬ ನೆಮ್ಮದಿ ಬದುಕು ಕಾಣಲು ಸಾಧ್ಯ ಎಂದರು.ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್ ಟಿ ಮಾತನಾಡಿದರು.ಜಯಶ್ರೀ ಕೊರಗರ, ಶಾಂತಾ ಭಜಂತ್ರಿ,ಸರೋಜಾ ಅಗಡಿ,ರಾಜೇಶ್ವರಿ ಬಿಷ್ಟನಗೌಡ್ರ, ಜಯಮ್ಮ ಅಗಡಿ ಅವರನ್ನು ಶ್ರೀ ಮಠದಿಂದ ಸನ್ಮಾನಿಸಿ, ಗೌರವಿಸಲಾಯಿತು ಮುನ್ನ ಜರುಗಿದ ವಚನ ಗೋಷ್ಠಿಯಲ್ಲಿ ಬಸವರಾಜ ಸಣ್ಣಂಗಿ,ರಂಜನಾ ಭಟ್,ರೇಣುಕಾ ಗುಡಿಮನಿ,ಜುಬೇದಾ ನಾಯ್ಕ್‌, ಅಂಬಿಕಾ ಹಂಚಾಟೆ,ಚಂಪಾ ಹುಣಸಿಕಟ್ಟಿ,ಜ್ಯೋತಿ ಬಶೆಟ್ಟಿ, ಅಪ್ಸರಾ ತುಮ್ಮಿನಕಟ್ಟಿ,ಮಲ್ಲೇಶ ದಂಡಿನ,ಭೂಮಿಕಾ ರಜಪೂತ ವಿನೂತಾ ಅಂಗಡಿ,ಮೇಘನಾ ಟಿ.ಎಸ್‌. ಮತ್ತು ಲಿಪಿಕಾ ಟಿ.ಎಸ್‌. ಪಾಲ್ಗೊಂಡಿದ್ದರು. ಜಿ.ಎಂ.ಓಂಕಾರಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಅರಳಿಕಟ್ಟಿ ಗೂಳಪ್ಪ ಅಧ್ಯಕ್ಷತೆ ವಹಿಸಿದ್ದರು. ಅನಿತಾ ಉಪಲಿ ನಿರೂಪಿಸಿದರು.ಸತೀಶ ಎಂ.ಬಿ ಸ್ವಾಗತಿಸಿದರು.ಚಂದ್ರು ದೊಡ್ಡಮನಿ ವಂದಿಸಿದರು.