ಮಹದೇವಪ್ಪ ನಾಯ್ಕಪ್ಪಗೋಳ ಸರ್ಕಾರಿ ಜಮೀನನ ಮಾವಿನಗಿಡ ನೆಟ್ಟರು

ಮಹದೇವಪ್ಪ ನಾಯ್ಕಪ್ಪಗೋಳ ಸರ್ಕಾರಿ ಜಮೀನನ ಮಾವಿನಗಿಡ  ನೆಟ್ಟರು Mahadevappa planted a mango tree on Naikappagol government land

ಯರಗಟ್ಟಿ  29: ತಾಲೂಕಿನ ಯರಗಣವಿ ಗ್ರಾಮದ ಸರ್ವೇ ನಂ.34ರ ಸರ್ಕಾರಿ ಜಮೀನನ್ನು ಗುಡುಮಕೇರಿ ಗ್ರಾಮದ ಲಕ್ಷ್ಮಣ ಮಹದೇವಪ್ಪ ನಾಯ್ಕಪ್ಪಗೋಳ ಎಂಬಾತನು ಅನಧಿಕೃತವಾಗಿ ಸಾಗು ಮಾಡಿ ಮಾವಿನಗಿಡಗಳನ್ನು ಹಚ್ಚುತ್ತಿರುವದನ್ನು ಗಮನಿಸಿದ ತಹಸೀಲ್ದಾರ ಎಮ್‌. ವ್ಹಿ. ಗುಂಡಪ್ಪಗೋಳ ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಾವಿನ ಅಗಿಗಳನ್ನು ವಶಪಡಿಸಿಕೊಂಡು ಅನಧಿಕೃತವಾಗಿ ಸಾಗು ಮಾಡುತ್ತಿರುವದನ್ನು ತೆರವುಗೊಳಿಸಿದರು.ಈ ವೇಳೆ ಕಂದಾಯ ನೀರೀಕ್ಷಕ ವಾಯ್ ಎಫ್ ಮುರ್ತೇಣ್ಣವರ, ಗ್ರಾಮ ಆಡಳಿತಾಧಿಕಾರಿ ಯಲ್ಲಪ್ಪ ಬಾಂಗಿ ಸೇರಿದಂತೆ ಗ್ರಾಮ ಸಹಾಯಕರು ಇದ್ದರು.