ಮದಭಾವಿ ಕೃಷಿ ಪತ್ತಿನ ಸಂಘಕ್ಕೆ ಸದಸ್ಯರ ಸಹಕಾರದಿಂದ 84 ಲಕ್ಷ 34 ಸಾವಿರದಷ್ಟು ಲಾಭ: ನಿಜಗುಣಿ ಮಗದುಮ್
Madabhavi Agricultural Credit Association has benefited from the cooperation of its members by earni
ಅಥಣಿ 25: ಮದಭಾವಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2024-25 ನೇ ಸಾಲಿನಲ್ಲಿ 84 ಲಕ್ಷ 34 ಸಾವಿರದಷ್ಟು ಲಾಭವಾಗಿದ್ದು, ಇದರಲ್ಲಿ ಸದಸ್ಯರಿಗೆ ಶೇ.14 ಅ ರಷ್ಟು ಲಾಭಾಂಶ ಕೊಡಲು ನಿರ್ಧರಿಸಲಾಗಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ನಿಜಗುಣಿ ಮಗದುಮ ಹೇಳಿದರು. ಅವರು ಸಹಕಾರಿ ಸಂಘದ 66 ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಘ 83 ಕೋಟಿ 60 ಲಕ್ಷ ವಹಿವಾಟು ನಡೆಸಿದ್ದು, ಸದಸ್ಯರಿಂದ 15 ಕೋಟಿ 21 ಲಕ್ಷ ರೂ.ಗಳಷ್ಟು ಠೇವಣಿ, 40 ಕೋಟಿ 87 ಲಕ್ಷ 54 ಸಾವಿರ, 2 ಕೋಟಿ 20 ಲಕ್ಷ 29 ಸಾವಿರ ಶೇರು ಬಂಡವಾಳ ಹೊಂದಿದೆ ಎಂದ ಅವರು ಸಹಕಾರಿ ಸಂಘ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ, ಕಾಗವಾಡ ಮತಕ್ಷೇತ್ರದ ಧುರೀಣ ವಿನಾಯಕ ಬಾಗಡಿ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು. ನಮ್ಮ ಸಂಘದ ಸದಸ್ಯರಿಗೆ ಮಾರ್ಚ 2025 ರ ವರೆಗೆ 32 ಕೋಟಿ 81 ಲಕ್ಷ ಸಾಲ ವಿತರಿಸಲಾಗಿದ್ದು, ಈ ಪೈಕಿ 23 ಕೋಟಿ 50 ರೂ.ಗಳಷ್ಟು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದ ಅವರು ಸದಸ್ಯರು ತಾವು ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಕ್ಟೋಬರ್ 19 ರಂದು ನಡೆಯಲಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಥಣಿ ತಾಲೂಕಿನಿಂದ ಸ್ಪರ್ಧೆ ಮಾಡಿರುವ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ತಾಲೂಕಿನಿಂದ ಸ್ಪರ್ಧೆ ಮಾಡಿರುವ ಶಾಸಕ ರಾಜು ಕಾಗೆ ಇವರಿಗೆ ನಮ್ಮ ಗ್ರಾಮದಲ್ಲಿರುವ ಎರಡೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಬೆಂಬಲ ಕೊಡುವುದಾಗಿ ನಿಜಗುಣಿ ಮಗದುಮ್ ಘೋಷಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಅಶೋಕ ಪೂಜಾರಿ, ನಿರ್ದೇಶಕರಾದ ಅರ್ಜುನ ಇಬ್ರಾಹಿಂಪುರ, ಭೀಮು ಚೌಗಲಾ, ಅಮಸಿದ್ಧ ರೂಗಿ, ಮನೋಹರ ಪೂಜಾರಿ, ವಿಠ್ಠಲ್ ಅವಳೆ, ಮಲ್ಲಪ್ಪ ದೇವಕತ್ತೆ, ಸಿದರಾಯ ಪತಂಗಿ, ರಾವಸಾಬ ಮಗದುಮ್, ಭೀಮಗೌಡ ಪಾಟೀಲ, ಪ್ರಮೀಳಾ ಮೆಂಡಿಗೇರಿ, ಭಾಗ್ಯಶ್ರೀ ಸೂರ್ಯವಂಶಿ, ಧುರೀಣರಾದ ಅಪ್ಪು ಚೌಗಲಾ, ಸೋಮನಿಂಗ ಮಗದುಮ್, ಉದಯ ಪವಾರ, ಸಾತಪ್ಪಾ ನಿವಲಗಿ, ಶಿವಾನಂದ ಮಗದುಮ್, ಅಪ್ಪಣ್ಣಾ ಮಹದುಮ್, ಈಶ್ವರ ಕುಂಬಾರೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡು ಸಲಹೆ, ಸೂಚನೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 