ಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ.ಜೆಎನ್‌.ಗಣೇಶ

MLA JN Ganesh inaugurated the Jowar procurement center

ಕಂಪ್ಲಿ:28. ರೈತರು ಬೆಳೆದ ಬೆಳೆಗೆ ಸರ್ಕಾರದ ಬೆಂಬಲ ಬೆಲೆಗೆ ಜೋಳ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದ ಗೋದಾಮು ಬಳಿಯಲ್ಲಿ ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ಬುಧವಾರ ಆಯೋಜಿಸಿದ್ದ ಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೈತರು ಪರವಾಗಿ ಹಗಲು ಇರಳು ಕೆಲಸ ಮಾಡುತ್ತವೇ ಹಿಂಗಾರು ಋತುವಿನಲ್ಲಿ ಬೆಳೆದ ಗುಣಮಟ್ಟದ ಜೋಳವನ್ನು ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ಮಾರಾಟ ಮಾಡಿ, ಉತ್ತಮ ದರದೊಂದಿಗೆ ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಸರ್ಕಾರ ಖರೀದಿ ಕೇಂದ್ರ ತೆರೆದಿದ್ದು, ಪ್ರತಿಯೋಬ್ಬ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಕೆ.ವಿರೇಶ, ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ಭಾಸ್ಕರ್‌ರೆಡ್ಡಿ, ಉಪಾಧ್ಯಕ್ಷೆ ಸಾವಿತ್ರಿ ಟಿ.ಎಂ, ಮಾರೇಶ, ಲಿಂಗಪ್ಪ, ಬಿ.ರಮೇಶ, ಅಂಜನೇಯಲು, ಪ್ರಭುಸ್ವಾಮಿ, ಗೂಬಾಜಿ ಮಂಜು, ಭೀಮಲಿಂಗಪ್ಪ, ವಿರುಪಾಕ್ಷಪ್ಪ, ಜಯಲಕ್ಷ್ಮಿ, ಕೆ.ಭೀಮಲಿಂಗಪ್ಪ, ವಿ.ವೆಂಕಟರಾಮಯ್ಯ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.