ಚಿನ್ನದ ಪದಕ ಪಡೆದ ಇಂದ್ರಜಾಗೆ ಶಾಸಕ ಗಣೇಶ ಇವರಿಂದ ಸನ್ಮಾನ

ಚಿನ್ನದ ಪದಕ ಪಡೆದ ಇಂದ್ರಜಾಗೆ ಶಾಸಕ ಗಣೇಶ ಇವರಿಂದ ಸನ್ಮಾನ MLA Ganesh felicitates Indraja, who won the gold medal

ಲೋಕದರ್ಶನ ವರದಿ

ಕಂಪ್ಲಿ 28:  ಸ್ಥಳೀಯ ವೀರಶೈವ ಭವನದಲ್ಲಿ ಅಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಜೆ.ಎನ್‌.ಗಣೇಶ್ ನೇತೃತ್ವದಲ್ಲಿ ವಿನೂತನ ಮಹಿಳಾ ಮದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಇಂದ್ರಜಾ ಇವರಿಗೆ ಬಹುಮತದ ಜೊತೆಗೆ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಸಕ ಗಣೇಶ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಉತ್ತಮ ಪ್ರಜೆಗಳು ಎಂಬಂತೆ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆಯೊಂದಿಗೆ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತರುವ ಜೊತೆಗೆ ಪೋಷಕರ ಆಸೆ, ಆಕಾಂಸೆಗಳನ್ನು ಈಡೇರಿಸಬೇಕು.

ಪೋಷಕರು ಮಕ್ಕಳಿಗೆ ಒಳ್ಳೆಯ ಭವಿಷ್ಯ ಒದಗಿಸಿಕೊಡಬೇಕೆಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಿ ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 850ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಎಂದರು. ನಂತರ ವಿನೂತನ ಮಹಿಳಾ ಮದವಿ ಮಹಾವಿದ್ಯಾಲಯದ ಉಪನ್ಯಾಸಕಿ ಸುನೀತಾ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಗಣೇಶ ಧರ್ಮಪತ್ನಿ ಶ್ರೀದೇವಿ, ಕ್ಷೇತ್ರಶಿಕ್ಷಣಾಧಿಕಾರಿ ಸಿದ್ಧಲಿಂಗಮೂರ್ತಿ, ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಇಸಿಒ ಟಿ.ಎಂ.ಬಸವರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್‌.ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ, ಶಿಕ್ಷಣ ಸಂಸ್ಥೆಗಳ ಪಿ.ನಾಗೇಶ್ವರರಾವ್, ಯು.ಶಿವರಾಜ, ಎನ್‌.ಲೋಕೇಶ, ಮುಖಂಡರಾದ ಕೆ.ಷಣ್ಮುಕಪ್ಪ, ಬಳ್ಳಾಪುರ ಲಿಂಗಪ್ಪ, ಬಿ.ಸಿದ್ದಪ್ಪ, ಸುಗ್ಗೇನಹಳ್ಳಿ ರಮೇಶ ಸೇರಿದಂತೆ ಶಾಲಾ-ಕಾಲೇಜು ಮುಖ್ಯಸ್ಥರು, ಮುಖ್ಯಗುರುಗಳು, ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.