ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ
MLA DM Aihole launches road improvement work
ರಾಯಬಾಗ 14 : ಮತಕ್ಷೇತ್ರದಲ್ಲಿರುವ ತೋಟದ ರಸ್ತೆ ಸುಧಾರಣೆ ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದರ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಪಂಚಾಯತ ರಾಜ್ ಇಲಾಖೆಯಿಂದ ವಿವಿಧ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚಿಂಚಲಿ ಮುಖ್ಯ ರಸ್ತೆಯಿಂದ ಮಾಂಗ ಮನೆಯ ವರೆಗೆ ಹಾಗೂ ಡೋರ ಜನಾಂಗದ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, 30 ಲಕ್ಷ ರೂ.ವೆಚ್ಚದಲ್ಲಿ ಉಪ್ಪಾರ ಕೋಡಿ ರಸ್ತೆಯಿಂದ ಚಿಂಚಲಿ-ಬೆಕ್ಕೇರಿ ಕೂಡು ರಸ್ತೆ ಸುಧಾರಣೆ, 5 ಲಕ್ಷ ರೂ.ವೆಚ್ಚದಲ್ಲಿ ಧರಣ ರಸ್ತೆಯಿಂದ ಹಳಚಪಟ್ಟಿ ರಸ್ತೆ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.
ಸದಾಶಿವ ಘೋರೆ್ಡ, ಅಂಕುಶ ಜಾಧವ, ಅನೀಲ ಮೈಶಾಳೆ, ಕಲ್ಲಪ್ಪ ಮೈಶಾಳೆ, ಪ್ರಭು ಮೈಶಾಳೆ, ಸಂಜು ಮೈಶಾಳೆ, ಕದ್ದು ಜಾಧವ, ಪೊಪಟ ಜಾಧವ, ಗಂಗಪ್ಪ ಪುಜೇರಿ, ರಾಮು ಪುಜೇರಿ, ಲಕ್ಷ್ಮಣ ಕೋಳಿ, ರಾಮಾ ಕೋಳಿ, ಗಣಪತಿ ಕೋಳಿ, ಪ್ರಕಾಶ ಜಾಧವ, ದೀಪಕ ಜಾಧವ, ಅಜಿತ ಜಾಧವ, ಲಕ್ಷ್ಮಣ ತುಳಸಗೇರಿ, ರಾವಸಾಬ ಜಾಧವ, ಮಲ್ಲು ಪಾಟೀಲ, ಮಹಾವೀರ ಮಾಂಜರೆ, ರಾಜು ಪೋಳ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 