ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ಅಲಂಕಾರಿಕ ಬೀದಿ ದೀಪಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ
MLA Basavaraja Shivanna launches electric decorative street lights installed on roads
ಬ್ಯಾಡಗಿ 02 : ಪಟ್ಟಣದಿಂದ ಕಾಕೋಳಕ್ಕೆ ತೆರಳಲಿರುವ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ಅಲಂಕಾರಿಕ ಬೀದಿ ದೀಪಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.ಸ್ಥಳೀಯ ಲೋಕೋಪಯೋಗಿ ಇಲಾಖೆಯ ವತಿಯಿಂದ ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆ ಯೋಜನೆಯ ಲೆಕ್ಕ ಶಿರ್ಷಿಕೆ ಯೋಜನೆಯಡಿಯಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಹಾವೇರಿಯಗಣೇಶ ಎಲೆಕ್ಟ್ರಿಕ್ ವಿದ್ಯುತ ಗುತ್ತಿಗೆದಾರ ಗಂಗಾಧರ ಅವರು ಕೈಕೊಂಡಿರುವ ಕಾಮಗಾರಿಗೆ ಚಾಲನೆ ನೀಡಿ ಶಾಸಕರು ಮಾತನಾಡಿದರು.ಪಟ್ಟಣದಲ್ಲಿ ಅಳವಡಿಸಲಾಗಿರುವ ಅಲಂಕಾರಿಕ ವಿದ್ಯುತ್ ದೀಪಗಳು ಪಟ್ಟಣದ ಜನರನ್ನು ಆಕರ್ಷಿಸುತ್ತವೆ. ನಮ್ಮ ನೆರೆಹೊರೆಯ ಗ್ರಾಮದವರನ್ನು ಕೂಡಾ ಆಕರ್ಷಿಸಿ ಸಂತುಷ್ಟಗೊಳಿಸುತ್ತಲಿವೆ. ಈ ಬೀದಿ ದೀಪಗಳು ಜನರನ್ನು ಸುರಕ್ಷಿತವಾಗಿಡಲು ಸಹಕಾರ ನೀಡಲಿವೆ. ಸಣ್ಣ ಪುಟ್ಟ ಅಂಗಡಿ ವ್ಯಾಪಾರಸ್ಥರಿಗೂ ಮತ್ತು ಸಂಚರಿಸುವ ಸವಾರರಿಗೂ ಸಹಕಾರ ದೊರೆಯಲಿವೆ.ದೊಡ್ಡ ದೊಡ್ಡ ನಗರಗಳಲ್ಲಿ ಸಂಚರಿಸುವ ಅನುಭವ ಉಂಟಾಗುತ್ತಿದೆ. ಕಳ್ಳತನಗಳಂತ ದಂಧೆಗಳು ಹಾಗೂ ಇತರೇ ವ್ಯವಹಾರಗಳನ್ನು ಕೂಡಾ ಬೀದಿ ದೀಪಗಳ ಬೆಳಕಿನಿಂದ ಕಡಿಮೆ ಮಾಡಲಿವೆ ಎಂದರಲ್ಲದೇ ಈ ಬೀದಿ ದೀಪಗಳ ಪ್ರಯೋಜನವನ್ನು ಪಟ್ಟಣದ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದರು.ಇಂತಹ ಅಲಂಕಾರಿಕ ಬೀದಿ ದೀಪಗಳನ್ನು ಪಟ್ಟಣದ ಇತರೇ ರಸ್ತೆಗಳಿಗೂ ಅಳವಡಿಸುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ಭರವಸೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಂಜೀನೀಯರ್ ಆಂಜನೇಯ, ಕಾಂಗ್ರೇಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ,ಧುರೀಣರಾದ ಬೀರಣ್ಣ ಬಣಕಾರ, ಡಿ.ಎಚ್.ಬುಡ್ಡನಗೌಡ್ರ,ರಾಮಣ್ಣ ಕೋಡಿಹಳ್ಳಿ, ಬಸಣ್ಣ ಚತ್ರದ, ದುರ್ಗೇಶ ಗೋಣೆಮ್ಮನವರ, ಮಜೀದ್ ಮುಲ್ಲಾ, ಹನುಮಂತಪ್ಪ ಬಂಬಲಾಪುರ, ಗೀತಾ ರಾಯ್ಕರ, ಸಿ.ಎಚ್.ಮೋಹನಕುಮಾರ ಗುತ್ತಿಗೆದಾರ ಗಂಗಾಧರ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 