ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ MLA Aihole launches construction work for Ambedkar Bhavan

ರಾಯಬಾಗ, 21 ; ಡಾ.ಬಿ.ಆರ್‌.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಬೇಕೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.  

ಶನಿವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಮುಖಂಡರು ಮುತುರ್ವಜಿಯಿಂದ ಅಂಬೇಡ್ಕರ ಭವನವನ್ನು ಒಳ್ಳೆ ಗುಣಮಟ್ಟದಲ್ಲಿ ನಿರ್ಮಿಸಿಕೊಳ್ಳಬೇಕು. ಭವನದ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.  

ಜಿ.ಪಂ.ಎಇ ಎಸ್‌.ಎಸ್‌.ಹೊಸಮನಿ, ಸದಾಶಿವ ಘೋರೆ​‍್ಡ, ಅಂಕುಶ ಜಾಧವ, ಸುಭಾಷ ಕೋರೆ, ವಿಲಾಸ ಬಸನಾಯ್ಕ, ಸಂಜು ಮೈಶಾಳೆ, ನಾಗು ಢಾಲೆ, ಜಯಪಾಲ ಬಸನಾಯ್ಕ, ಪ್ರಕಾಶ ಸಂಗಣ್ಣವರ, ಜಾನು ಕೋಳಿಗುಡ್ಡೆ, ಕುಮಾರ ಖೋತ, ರಾಜು ಪೋಳ, ಮಲ್ಲು ಕಮತೆ, ತುಕಾರಾಂ ಟೊನ್ನೆ, ಅಜೀತ ಈರಗಾರ, ಮಹೇಂದ್ರ ಗಾಣಿಗೇರ, ರಮೇಶ ಹಾರೂಗೇರಿ, ರಾಜು ವಡ್ಡರ, ಪುರಂದರ ಕಾಂಬಳೆ ಸೇರಿ ಅನೇಕರು ಇದ್ದರು.