ಟೀಪು ಸುಲ್ತಾನ್ ಸರ್ಕಲ್ಗೆ ಲಾರಿ ಡಿಕ್ಕಿ: ಸರ್ಕಲ್ ನಾಶ
Lorry hits Tipu Sultan Circle: Circle destroyed
ಲೋಕದರ್ಶನ ವರದಿ
ಜಮಖಂಡಿ 27: ನಗರದ ಟೀಪು ಸುಲ್ತಾನ್ ಸರ್ಕಲ್ಗೆ ಲಾರಿ ಡಿಕ್ಕಿ ಪರಿಣಾಮ ಸಂಪೂರ್ಣವಾಗಿ ಟೀಪು ಸುಲ್ತಾನ್ ಸರ್ಕಲ್ ನಾಶವಾಗಿರುವ ಘಟನೆ ಜರುಗಿದೆ. ಇಲ್ಲಿನ ಕುಂಚನೂರ ರಸ್ತೆಯ ಹತ್ತಿರ ಇರುವ ಟೀಪು ಸುಲ್ತಾನ್ ಸರ್ಕಲ್ಗೆ ಮಹಾರಾಷ್ಟ್ರದ ಮೂಲದ ಸಿಮೆಂಟ್ ತುಂಬಿದ ಲಾರಿ ಮುಧೋಳ ಕಡೆಯಿಂದ ಅತೀ ವೇಗವಾಗಿ ಲಾರಿ ಚಲಾಯಿಸಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಸರ್ಕಲ್ಗೆ ಡಿಕ್ಕಿ ಹೊಡೆದಿದೆ. ರಾತ್ರಿ ಸುಮಾರ 8 ಘಂಟಗೆ ಈ ಘಟನೆ ಜರುಗಿದ ಪರಿಣಾಮ ಟೀಪು ಸುಲ್ತಾನ್ ಸರ್ಕಲ್ ಸಂಪೂರ್ಣ ನಾಶವಾಗಿದೆ.
ಟೀಪು ಸುಲ್ತಾನ್ ಸರ್ಕಲ್ನ ಮಧ್ಯ ಭಾಗದಲ್ಲಿ ಹೈಮಾಕ್ಸ್ ವಿದ್ಯುತ್ ಕಂಬ ನೆಲಕ್ಕೆ ಉರುಳಿದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.ಸತತವಾಗಿ ಜನಸಂದಣಿಯ ಇರುವ ಸರ್ಕಲ್ ನಿತ್ಯ ನೂರಾರು ವಾಹನಗಳು ಹಾಗೂ ಬೈಕ್ ಸವಾರರು ಸಾರ್ವಜನಿಕರು ನಿತ್ಯ ಓಡಾಡುವ ಸರ್ಕಲ್ನಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ. ಲಾರಿ ಚಾಲಕ ಅರೆಪ್ರಜ್ಞೆಯನ್ನು ತಪ್ಪಿದ್ದು ಲಾರಿಯೊಳಗೆ ಸಿಲಿಕಿಕೊಂಡಿದ್ದಾನೆ. ಆತನನ್ನು ಸಾರ್ವಜನಿಕರು ಹೋರಗೆ ತೆಗೆದು ಸರಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಶಹರ ಪೋಲಿಸರು ಭೇಟಿ ನೀಡಿ. ಸಾರ್ವಜನಿಕರನ್ನು ಚದುರಿಸಲು ಹರಸಾಹಸ ಪಡುವ ಜೊತೆಗೆ ಲಾಠಿ ರುಚಿಯನ್ನು ಸಹ ತೋರಿಸಿದ್ದಾರೆ.
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು 