ಸೇವೆಯ ಮೂಲಕವೇ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ: ದೇಶಪಾಂಡೆ
Lions organization is recognized worldwide through service: Deshpande
ಧಾರವಾಡ 25: ಮೇಲ್ವಿನ್ ಜೋನ್ಸರು 1917ರಲ್ಲಿ ಸ್ಥಾಪಿಸಿದ ಲಯನ್ಸ್ ಸೇವಾ ಸಂಸ್ಥೆಯು ಇಂದು ಜಾಗತಿಕ ಮಟ್ಟದಲ್ಲಿ ಉತ್ತಮ ಸಂಘಟನೆಯಾಗಿದ್ದು, ಹಾಗೆಯೇ ಸೇವೆಯ ಮೂಲಕವೇ ಲಯನ್ಸ್ ಸಂಸ್ಥೆ ಮತ್ತು ರೋಟರಿ ಸಂಸ್ಥೆಗಳು ವಿಶ್ವದಲ್ಲಿ ಗುರುತಿಸಲ್ಪಟ್ಟಿವೆ ಎಂದು ಖ್ಯಾತ ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ ಹೇಳಿದರು.
ಧಾರವಾಡ ಲಯನ್ಸ್ ಸಂಸ್ಥೆಯು ಏರಿ್ಡಸಿದ ವೈದ್ಯರ ದಿನೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,ವೈದ್ಯಕೀಯ ಕ್ಷೇತ್ರದಲ್ಲಿರುವದು ಒಂದು ವೃತ್ತಿಯಲ್ಲ.ಬದಲಾಗಿ ಮಾನವೀಯತೆ, ಶ್ರದ್ಧೆ ಹಾಗೂ ಸೇವಾ ಮನೋಭಾವದ ಸಂಬಂಧವಾಗಿದೆ.ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗೆ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ವಹಿಸಿದ್ದರು.
ಡಾ.ಕೆ.ವಿ.ಅಚ್ಯುತ,ಡಾ.ಅನಿರುಧ್ ಕುಲಕರ್ಣಿ ಮತ್ತು ಡಾ.ಶ್ರೇಯಾ ಪಾಸ್ತೆ ಅವರನ್ನು ಗೌರವಿಸಲಾಯಿತು.
ಶೈಲಾ ಕರಗುದರಿ, ಹರ್ಷ ದೇಸಾಯಿ , ಶ್ರೀಕಾಂತ ದೇವಗಿರಿ, ಹರ್ಷ ಡಂಬಳ, ಆನಂದ ಕಮಲಾಪುರ,ಅರವಿಂದ ಹೆಬಸೂರ, ಭುಜಂಗ ಶೆಟ್ಟಿ,ಗುರುರಾಜ ಪಿಸೆ,ಉಷ್ಮಾ ದೇಸಾಯಿ, ಆರತಿ ಕಮಲಾಪುರ,ಅನುಪಮಾ ಶೆಟ್ಟಿ, ಕವಿತಾ ಅಂಗಡಿ,ನಮ್ರತಾ ಪಾಟೀಲ,ವನಿತಾ ಹೆಬಸೂರ, ರಾಜಶ್ರೀ ಗುದಗನವರ ಇದ್ದರು.
ಅಮೃತಾ ಜೋಶಿ ಧ್ವಜ ವಂದನೆ , ನೀತಾ ಕೊಪ್ಪಿಕರ ಪರಿಚಯಿಸಿದರು. ಕಾರ್ಯದರ್ಶಿ ಸುರೇಶ ಗುದಗನವರ ನಿರೂಪಿಸಿದರು. ರಶ್ಮೀ ಭಾರದ್ವಾಜ್ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 