ಲಯನ್ಸ್‌ ಕ್ಲಬ್‌ನಿಂದ ಅನ್ನದಾಸೋಹ: ರೋಗಿಗಳಿಗೆ ಸಹಾಯ

ಲಯನ್ಸ್‌ ಕ್ಲಬ್‌ನಿಂದ ಅನ್ನದಾಸೋಹ: ರೋಗಿಗಳಿಗೆ ಸಹಾಯ Lions Club distributes food: Help for the sick

ಲಯನ್ಸ್‌ ಕ್ಲಬ್‌ನಿಂದ ಅನ್ನದಾಸೋಹ: ರೋಗಿಗಳಿಗೆ ಸಹಾಯ 

ಮಹಾಲಿಂಗಪುರ 29: ಲಯನ್ಸ್‌ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ ವತಿಯಿಂದ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. 

ಪೂರ್ವಭಾವಿ ಅಧ್ಯಕ್ಷ ಹುಚ್ಚೇಶ ವಡ್ಡರ ನೇತೃತ್ವದಲ್ಲಿ ದಾಸೋಹ ಸೇವೆ ಮಾಡಿದರು. ಲಯನ್ಸ್‌ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ, ಕಾರ್ಯದರ್ಶಿ ಡಾ.ವಿದ್ಯಾ ದಿನ್ನಿಮನಿ, ಖಜಾಂಚಿ ಪ್ರಶಾಂತ ಅಂಗಡಿ, ಸದಸ್ಯರಾದ ಪ್ರಶಾಂತ ತಾಳಿಕೋಟಿ, ಅಶ್ವಿನಿ ಕೋಳಿಗುಡ್ಡ, ಡಾ.ಉಮಾ ಗುಂಡಾ, ಸಂಜು ಅಂಬಿ, ರಾಜು ತಾಳಿಕೋಟಿ ರಮೇಶ ಶೆಟ್ಟರ್ ಉಪಸ್ಥಿತರಿದ್ದರು. ಆಸ್ಪತ್ರೆಯಲ್ಲಿನ 300ಕ್ಕೂ ಹೆಚ್ಚಿನ ರೋಗಿಗಳಿಗೆ ಅನ್ನ ದಾಸೋಹ ನೀಡಲಾಯಿತು. ರೋಗಿಗಳು ಲಯನ್ಸ್‌ ಕ್ಲಬ್‌ಗೆ ಹಾರೈಸಿ, ಶ್ಲಾಘನಿಯ ವ್ಯಕ್ತಪಡಿಸಿದರು.