ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ
Lions Club Inauguration Ceremony

ಧಾರವಾಡ 26: ಲಯನ್ಸ್ ಕ್ಲಬ್ ಧಾರವಾಡದ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 28ರಂದು ಸಂಜೆ 6.30ಕ್ಕೆ ಹೊಟೇಲ್ ಮಂದಾರ ರೆಜೆನ್ಸಿಯಲ್ಲಿ ಆಯೋಜಿಸಲಾಗದೆ.
ಬೆಳಗಾವಿಯ ಮಾಜಿ ಜಿಲ್ಲಾ ಗವರ್ನರ್ ಮೋನಿಕಾ ಪಿ.ಸಾವಂತ ಪದಗ್ರಹಣ ನೆರವೇರಿಸುವರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ.ಮೀನಾ ಚಂದಾವರಕರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾಜಿ ಜಿಲ್ಲಾ ಗವರ್ನರ್ ಹರ್ಷ ದೇಸಾಯಿ, 2025-26ನೆಯ ಸಾಲಿನ ರೀಜನ್ ಛೇರಮನ್ ಜ್ಞಾನೇಶ ನಾತು ಮತ್ತು ಜೋನ್ ಛೇರಮನ್ ಶೈಲಾ ಕರಗುದರಿ ಪಾಲ್ಗೊಳ್ಳುವರು. ಧಾರವಾಡ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಶ್ವಿನ್ ಕೊಪ್ಪಿಕರ, ಕಾರ್ಯದರ್ಶಿಯಾಗಿ ಪ್ರೊ.ಸುರೇಶ ಗುದಗನವರ, ಖಜಾಂಚಿಯಾಗಿ ಶ್ರೀಕಾಂತ ದೇವಗಿರಿ, ಸಹ ಕಾರ್ಯದರ್ಶಿಯಾಗಿ ಡಾ.ರಾಜಶ್ರೀ ಗುದಗನವರ, ಸಹ ಖಜಾಂಚಿಯಾಗಿ ಚಂದ್ರಶೇಖರ ಭೈರ್ಪನವರ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅದಿ ಕಾರ ವಹಿಸಿಕೊಳ್ಳುವರು. ಹಾಲಿ ಅಧ್ಯಕ್ಷ ಗುರುರಾಜ ಪಿಸೆ ಅಧ್ಯಕ್ಷತೆ ವಹಿಸುವರು ಎಂದು ಪದಗ್ರಹಣ ಸಮಾರಂಭದ ಛೇರಮನ್ ಗಿರಿಧರ ದೇಸಾಯಿ ತಿಳಿಸಿದ್ದಾರೆ.
ಕವಿತಾ ಅಂಗಡಿ, ಡಾ.ಅನಿರುದ್ಧ ಕುಲಕರ್ಣಿ, ನಮ್ರತಾ ಪಾಟೀಲ ಕ್ರಮವಾಗಿ ಮೊದಲ, ದ್ವೀತಿಯ, ತೃತೀಯ ಉಪಾಧ್ಯಕ್ಷರುಗಳಾಗಿ ಹಾಗೂ ಉಷ್ಮಾ ದೇಸಾಯಿ ಟೇಲ್ ಟ್ವಿಸ್ಟರ್ ಮತ್ತು ರಶ್ಮೀ ಭಾರದ್ವಾಜ ಲಯನ್ ಟೇಮರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಸಂತ ಭಟ್, ವಿದ್ಯಾಧರ ಅಂಗಡಿ, ಅನುಪಮಾ ಶೆಟಿ ್ಟ, ಡಾ.ಉಷಾ ಗದ್ದಗಿಮಠ, ಅಮೃತಾ ಜೋಶಿ, ಅರವಿಂದ ಹೆಬಸೂರ, ಶಕುಂತಲಾ ಕುಂದೂರ, ಮೀರಾ ರಾವ್, ವೃಷಭ ಕರೋಲೆ, ಡಾ.ಅಶ್ವಿನ್ ಕುಲಕರ್ಣಿ, ಅರತಿ ಕಮಲಾಪುರ ಸದಸ್ಯತ್ವ ಸಮಿತಿಗೆ, ಮಾರ್ಕೆಟಿಂಗ್ ಆಂಡ್ ಕಮ್ಯೂನಿಕೇಷನ್ಗೆ ಆನಂದ ಕಮಲಾಪುರ, ಎಲ್.ಸಿ.ಐ.ಎಫ್. ಗೆ ಭುಜಂಗ ಶೆಟ್ಟಿ ಮತ್ತು ಸೇವಾ ಸಮಿತಿಗೆ ಡಾ.ಕೆ.ವಿ.ಅಚ್ಯುತ ಅಧಿಕಾರ ವಹಿಸಿಕೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 