18 ವರ್ಷ ಪತ್ರಿಕೋದ್ಯಮದಲ್ಲಿ ಸೇವೆಗೈದ ಲಿಂಗರಾಜ. ಭ.ಪಾಟೀಲರಿಗೆ ಸನ್ಮಾನ

18 ವರ್ಷ ಪತ್ರಿಕೋದ್ಯಮದಲ್ಲಿ ಸೇವೆಗೈದ ಲಿಂಗರಾಜ. ಭ.ಪಾಟೀಲರಿಗೆ ಸನ್ಮಾನ Lingaraj, who served in journalism for 18 years, was felicitated. B. Patil


ಧಾರವಾಡ 03: 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಪ್ರತಿ ವರ್ಷದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಧೀಮಂತ ಪ್ರಶಸ್ತಿಯನ್ನು ಈ ವರ್ಷ ಹಿರಿಯ ಪತ್ರಕರ್ತರಾದ ಲಿಂಗರಾಜ. ಭ.ಪಾಟೀಲರನ್ನು ಕಳೆದ 18 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಗಣಸಿ ಮಹಾಪೌರರಾದ ಜ್ಯೋತಿ ಪಾಟೀಲ ಮತ್ತು ಉಪಮಹಾಪೌರರಾದ ಸಂತೋಷ ಚವ್ಹಾಣ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ,ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಇಮ್ರಾನ್ ಯಲಿಗಾರ,ಸಭಾನಾಯಕ ಈರೇಶ ಅಂಚಟಗೇರಿ,ಶೀವು ಹಿರೇಮಠ, ತಿಪ್ಪಣ್ಣ ಮಜ್ಜಗಿ,ತುಳಜಪ್ಪ ಪೂಜಾರ,ಶಂಬು ಸಾಲಿಮನಿ,ಪಾಲಿಕೆಯ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.