ಬುಡ್ಗ ಜಂಗಮ್ ಕಾಲೋನಿಯಲ್ಲಿ ಗ್ರಂಥಪಾಲಕರ ದಿನಾಚರಣೆ

ಬುಡ್ಗ ಜಂಗಮ್ ಕಾಲೋನಿಯಲ್ಲಿ ಗ್ರಂಥಪಾಲಕರ ದಿನಾಚರಣೆ Librarians' Day celebrated at Budga Jangam Colony

ಹೊಸಪೇಟೆ 12 : ಇಂದು ದಿನಾಂಕ : 12.08.2025 ರಂದು ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲೆಯ, ಹೊಸಪೇಟೆ ನಗರದ ಬುಡ್ಗಜಂಗಮ್ ಕಾಲೋನಿಯ ಅಲೆಮಾರಿ ಗ್ರಂಥಾಲಯ ಕಾರ್ಯಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯ ಪಿತಾಮಹರಾದ “ ಪದ್ಮಶ್ರೀ ಡಾಽಽ ಎಸ್‌.ಆರ್‌.ರಂಗನಾಥನ್‌” ರವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಪೂಜಾ ಕಾರ್ಯಕ್ರಮವು ನೆರವೇರಿಸಲಾಯಿತು.  

ಈ ಕಾರ್ಯಕ್ರಮ ಉದ್ದೇಶಿಸಿ ವಿಮುಕ್ತ ಬುಡಕಟ್ಟುಗಳ ಜಿಲ್ಲಾಧ್ಯಕ್ಷರಾದ  ಸಣ್ಣ ಮಾರೆಪ್ಪ ಅವರು ಮಾತನಾಡಿ ಅಲೆಮಾರಿಗಳ ಕಾಲೋನಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ 127 ಗ್ರಂಥಾಲಯಗಳೂ 2007-08ನೇ ಸಾಲಿನಲ್ಲಿ ಸರ್ಕಾರವು ಸ್ಥಾಪನೆ ಮಾಡಿದ್ದರಿಂದ ಅಲೆಮಾರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಮತ್ತು ಅಲೆಮಾರು ಮಕ್ಕಳು ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸಲು ಗ್ರಂಥಾಲಯದ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ವಿಮುಕ್ತ ಬುಕಟ್ಟುಗಳ ಒಕ್ಕೂದ ಉಪಾಧ್ಯಕ್ಷರಾದ ಶೇಖಪ್ಪ ಕಿನ್ನೂರಿ ಇವರ ಮಾತನಾಡಿ ನಮ್ಮ ಸಮಾಜದ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಅಲೆಮಾರಿ ಮಕ್ಕಳಿಗೆ ಗ್ರಂಥಾಲಯವು ಸದುಪಯೋಗವಾಗಿದೆ ಎಂದು ಹೇಳಿದರು. ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರ​‍್ಪ ಬಾದಿಗಿ ಮಾತನಾಡಿ ಗ್ರಂಥಾಲಯ ಪಿತಾಮಹ ಡಾಽಽ ಎಸ್‌.ಆರ್‌.ರಂಗನಾಥ ಅವರ ವಿವರವಾದ ಮಾಹಿತಿ ನೀಡುತ್ತಾ ಅಲೆಮಾರಿ ಗ್ರಂಥಾಲಯಕ್ಕೆ ಹೆಚ್ಚಿನ ರೀತಿಯಲ್ಲಿ ಮಕ್ಕಳು ಸದಸ್ಯರು ಜ್ಞಾನಾರ್ಜನೆ ಪ್ರತಿದಿನ ಆಗಮಿಸಿ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಟ್ಟದಲ್ಲಿ ಸದಸ್ಯರನ್ನು ನೊಂದಣಿ ಮಾಡಿಸುವಂತೆ ಕರೆಕೊಟ್ಟರು.   

ಈ ಕಾರ್ಯಕ್ರಮದಲ್ಲಿ  ವಿಜಯನಗರ ಜಿಲ್ಲಾ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಣ್ಣ ಮಾರೆಪ್ಪ, ಉಪಾಧ್ಯಕ್ಷರಾದ ಶೇಖಪ್ಪ ಕಿನ್ನೂರಿ, ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರ​‍್ಪ ಬಾದಿಗಿ, ಬುಡ್ಗಜಂಗಮ್ ಕಾಲೋನಿ ಮುಖಂಡರುಗಳಾದ ಡಿ.ಜಂಬಣ್ಣ, ಎ.ಸಣ್ಣ ಜಂಬಣ್ಣ, ವೈ.ಮಾರೆಪ್ಪ, ಸಣ್ಣ ಜಂಬಣ್ಣ, ಇತರರು ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.  ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಗೊಳಿಸಬೇಕೆಂದು ಕೋರಿಕೊಳ್ಳೂತ್ತಿದ್ದೇವೆ.