ಮನೆ-ಮನದಲ್ಲಿ ರಾರಾಜಿಸಲಿ ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜ: ಶ್ರೀನಿವಾಸ ಪಾಟೀಲ

ಮನೆ-ಮನದಲ್ಲಿ ರಾರಾಜಿಸಲಿ ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜ: ಶ್ರೀನಿವಾಸ ಪಾಟೀಲ Let our proud national flag reign in our homes and minds: Srinivas Patil

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ದೇಶಾದ್ಯಂತ ಆ.13 ರಿಂದ ಆ.15 ರ ವರೆಗೆ ಆರಂಭವಾಗಿರುವ "ಹರ ಘರ್ ತಿರಂಗಾ" ಅಭಿಯಾನದ ಅಂಗವಾಗಿ ಕೆಂಪವಾಡದ ತಮ್ಮ ಕಚೇರಿಯಲ್ಲಿ ಯುವ ಮುಖಂಡ ಶ್ರೀನಿವಾಸ ಪಾಟೀಲ ಧ್ವಜಾರೋಹಣ ನೆರವೇರಿಸಿ, ಅಭಿಯಾನಕ್ಕೆ ಚಾಲನೆ ನೀಡಿದರು. 

ಈ ವೇಳೆ ಮಾತನಾಡಿದ ಅವರು, 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.15 ರ ಸಂಜೆಯ ವರೆಗೆ ಎಲ್ಲರೂ ತಮ್ಮ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.ಈ ಸಮಯದಲ್ಲಿ ಮುಖಂಡರಾದ ಸಂಜು ಸಾವಂತ, ಶಂಕರ ಶೆಮಡೆ, ಚಂದ್ರಕಾಂತ ಪಾಟೀಲ, ಮಲಕಾರಿ ನಾಯಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.