ದುರ್ಬಲರನ್ನು ಮೇಲೆತ್ತುವ ಕೆಲಸ ಆಗಲಿ:ಡಾ.ಕಾರ್ಚಿ
Let's work to uplift the weak: Dr. Kaarchi
ತಾಳಿಕೋಟಿ 18: ವಿಶ್ವಕರ್ಮ ಸಮಾಜ ಬಸವಾದಿ ಶರಣರ ಕಾಯಕತತ್ವ ಪಾಲಿಸುವ ಸಮಾಜವಾಗಿದ್ದು, ಇವರಲ್ಲಿ ಬಹುತೇಕರು ಪ್ರತಿಭಾವಂತರಾಗಿದ್ದರೂ ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಇವರನ್ನು ಮೇಲೆತ್ತುವ ಕೆಲಸ ಸಮಾಜದಿಂದಾಗಬೇಕು ಎಂದು ಹಿರಿಯ ವೈದ್ಯ ಡಾ.ವಿ.ಎಸ್.ಕಾರ್ಚಿ ಹೇಳಿದರು.
ಬುಧವಾರ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ಹಿರಿಯರಾದ ವಿಶ್ವನಾಥ್ ಶರಣರ ಅವರು ಮಾತನಾಡಿ ದೇವಾನು ದೇವತೆಗಳನ್ನು ಸೃಷ್ಟಿ ಮಾಡುವ ಭಕ್ತಿ- ಶಕ್ತಿ ವಿಶ್ವಕರ್ಮ ಸಮಾಜಕ್ಕಿದೆ. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಈ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಸಭೆ ಸಮಾರಂಭ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನದ ಅಗತ್ಯವಿದೆ ಈ ಕೆಲಸಕ್ಕಾಗಿ ಸಮಾಜದ ಮುಖಂಡರು ಶ್ರಮ ವಹಿಸಬೇಕು ಎಂದರು. ಆರ್ ಎಸ್ ಎಸ್ ಮುಖಂಡ ಬಾಳುಬಕ್ಷಿ ಕರಮರಕರ ಹಾಗೂ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಪುರಸಭೆ ಸದಸ್ಯ ಮುದಕಪ್ಪ ಬಡಿಗೇರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ ಉಪಾಧ್ಯಕ್ಷ ಪ್ರಭಾಕರ್ ಹಿಪ್ಪರಗಿ ಖಜಾಂಚಿ ಶ್ರೀನಿವಾಸ ಪತ್ತಾರ ಸದಸ್ಯರಾದ ಗಂಗಾಧರ ಬಡಿಗೇರ,ಸುನೀಲ ವರದಪ್ಪನವರ,ನಾಗರಾಜ ಪತ್ತಾರ,ಮೋಹನ ಬಡಿಗೇರ, ಶಿಕ್ಷಕರಾದ ಜಿ.ಕೆ.ಪತ್ತಾರ,ಗಜಾನನ ಸೋನಾರ, ಅರ್ಚಕ ವಿಶ್ವನಾಥ ಆಚಾರ್ಯ, ರಾಜು ಪತ್ತಾರ, ಎಚರಣ್ಣ ಪತ್ತಾರ, ದೇವೇಂದ್ರ್ಪ ಬಡಿಗೇರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 