ಸಮಾಜವನ್ನು ಸಮಾನತೆಯ ಮಾರ್ಗದಲ್ಲಿ ಮುನ್ನಡೆಯಿಸಲಿ : ಶಾಸಕ ವಿಶ್ವಾಸ ವೈದ್ಯ
Let's move society forward on the path of equality: MLA Vishwas Vaidya
ಸವದತ್ತಿ 06 : ಮಹಾನ್ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಕಾರಿ ಹಾಗೂ ಭಾರತೀಯ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಪರಿನಿರ್ಮಾಣ ದಿನದಂದು ಮಹಾಚೇತನಕ್ಕೆ ಕೋಟಿ ಕೋಟಿ ನಮನಗಳು, ಸಮಾನತೆ,ಸ್ವಾಭಿಮಾನ, ಶಿಕ್ಷಣ ಮತ್ತು ಸಮಾಜಿಕ ನ್ಯಾಯ ಕುರಿತು ಅವರ ದೀರ್ಘದೃಷ್ಟಿ ನಮ್ಮನ್ನು ಇನ್ನಷ್ಟು ಪ್ರೇರೇಪಿಸುತ್ತದೆ ಅವರ ಆದರ್ಶಗಳು ಪ್ರತಿಯೊಬ್ಬರ ಬದುಕಿನಲ್ಲಿ ಬೆಳಕಾಗಿ,ನಮ್ಮ ಸಮಾಜವನ್ನು ಸಮಾನತೆಯ ಮಾರ್ಗದಲ್ಲಿ ಮುನ್ನಡೆಯಿಸಲಿ ಎಂದು ಶಾಸಕ ವಿಶ್ವಾಸ ವೈದ್ಯ ಅವರು ಹೇಳಿದರು. ಇಲ್ಲಿನ ಕೋಟೆ ಹತ್ತಿರದ ಡಾ ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿ ಮಾತನಾಡಿ ಈ ಅಂಬೇಡ್ಕರ ಮೂರ್ತಿಯ ಸುತ್ತಮುತ್ತಲು ಸೌಂದರೀಕರಣ ಮಾಡಿ ಕೊಡಬೇಕೆಂಬ ಆಶಯ ನನಗಿದೆ ಆದ್ದರಿಂದ ಸಮಾಜ ಬಾಂಧವರು ಒಂದು ಅವಕಾಶವನ್ನು ಕೊಟ್ಟದೆ ಸಂಪೂರ್ಣವಾಗಿ ಸೌಂದರ್ಯದಕಿರಣ,ಮಾಡಿಕೊಡುವುದಾಗಿ ಎಂದರು.
ಈ ವೇಳೆ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ,ತಾಪಂ ಇಓ ಆನಂದ್ ಬಡಕುಂದ್ರಿ. ಪಿಎಸ್ಐ ಕಲ್ಮೇಶ ಬನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಆರ್. ಆರ್. ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ,ಸೇರಿದಂತೆ ವಿವಿಧ ಇಲಾಖೆಯಅಧಿಕಾರಿಗಳು,ಹಾಗೂ ಮುಖಂಡರಾದ ಚಂದ್ರು ಶಾಮರಾಯಣ್ಣವರ, ಅಲ್ಲಮಪ್ರಭು ಪ್ರಭುನವರ, ಮಂಜುನಾಥ ಪಾಚಂಗಿ, ಮಕ್ತುಮ ತಹಶೀಲ್ದಾರ, ಬಸವರಾಜ ಆಯಟ್ಟಿ, ಎಮ್. ಕೆ. ಬೇವೂರ, ದಲಿತ ಸಮಾಜದ ಮುಖಂಡ ರುದ್ರ್ಪ ಚಲವಾದಿ,ಯಲ್ಲಪ್ಪ ಗೊರವನಕೋಳ್ಳ, ರವಿ ದೊಡಮನಿ, ಎಲ್,ಎಸ್, ನಾಯಕರ, ಬಸವರಾಜ ತಳವಾರ, ಕೃಷ್ಣಾ ಮಲ್ಲೂರ,ಮುದೆಪ್ಪ ಅಮಾತೆನ್ನವರ,ಮಹಾದೇವ ಮಡ್ಲಿ, ಚಂದ್ರು ಕಲ್ಲಮ್ಮನವರ, ಅನಿಲ ಗುಡಿಮನಿ, ಸೇರಿದಂತೆ ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 