ಮುಖ್ಯ ಮಂತ್ರಿಗಳ ಎಡಬಿಡಂಗಿ ಹೇಳಿಕೆ: ಆತ್ಮ ಸ್ಥೈರ್ಯ ಕಳೆದು ಕೊಳ್ಳುತ್ತಿರುವ ರೈತ: ಪಾಟೀಲ
ಲೋಕದರ್ಶನ ವರದಿ
ರಾಣಿಬೆನ್ನೂರು 10: ರಾಜ್ಯ ಸರಕಾರವು 18 ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಿಸಿದೆ. ಆದರೆ ಮುಖ್ಯ ಮಂತ್ರಿಗಳು ತಮ್ಮ ಎಡಬಿಡಂಗಿ ಹೇಳಿಕೆಗಳನ್ನು ನೀಡುವುದರ ಮೂಲಕ ರಾಜ್ಯದ ರೈತರು ಆತ್ಮ ವಿಶ್ವಾಸವನ್ನು ಕಳೆದು ಕೊಂಡು ಆತ್ಮಹತ್ಯಯ ದಾರಿ ಹಿಡಿಯುವಂತಾಗಿದೆ. ಕೂಡಲೇ ಸಂಪೂರ್ಣ ಸಾಲ ಮನ್ನಾ ಮಾಡಿ ಆದೇಶಿಸುವಂತೆ ರೈತಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ರವೀಂದ್ರ ಗೌಡ ಪಾಟೀಲ ಅವರು ಆಗ್ರಹಿಸಿದರು.
ಈ ಕುರಿತು ನಗರದಲ್ಲಿ ಆಯೋಜಿಸಿದ್ದ ಮಾದ್ಯಮ ಗೂಷ್ಠಿಯಲ್ಲಿ ಮಾತನಾಡಿದರು.
ಸತತ 4 ವರ್ಷಗಳ ಬರಗಾಲದ ನಂತರವು ಪುನ: ಈ ವರ್ಷವು ಮುಂಗಾರು ಮಳೆ ಕೈ ಕೂಟ್ಟಿದೆ ಹಾವೇರಿ, ದಾವಣಗೇರೆ, ಬಳ್ಳಾರಿ, ಕೂಪ್ಪಳ, ರಾಯಚೂರು, ಚಿಕ್ಕಬುಳ್ಳಾಪುರ, ಕಲಬುಗರ್ಿ, ಯಾದಗಿರಿ, ಬೀದರ, ವಿಜಯಾಪುರ, ಬಾಗಲಕೋಟೆ, ಗದಗ, ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ರೈತ ಮುಂಗಾರು ಮಳೆಯಿಂದ ವಂಚಿತನಾಗಿದ್ದಾನೆ ಎಂದರು.
ಪ್ರತಿವರ್ಷವೊ ಮುಂಗಾರು ಕೈ ಕೂಟ್ಟಾಗಲೂಮ್ಮೆ ಹಿಂಗಾರು ಸಹ ಅದೇ ಪರಿಸ್ಥಿತಿ ಮುಂದುವರೆಯುತ್ತಾ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಆಹಾಕಾರ ಎದ್ದಿದೆ.
ಇಂತಹ ಸಂದರ್ಭದಲ್ಲಿ ನಾಡಿನ ದೂರೆ ನೀಡಿರುವ ಅಪಹಾಸ್ಯದ ಹೇಳಿಕೆಗಳು ರೈತರ ಜಂಗಾಬಲವನ್ನೆ ಕುಸಿಯುವಂತೆ ಮಾಡಿದರು. ಅವರ ಹೇಳಿಕೆಗಳಿಂದ ರೈತರು ಪುನ: ಆತ್ಮ ಸ್ಥೈರ್ಯ ಕಳೆದು ಕೂಂಡು ನಿತ್ಯವೂ ಆತ್ಮಹತ್ಯ ಪ್ರಕರಣಗಳು ಹೆಚ್ಚಾಗುತ್ತಲಿವೆ ಎಂದು ವಿವರಿಸಿದರು.
18 ಜಿಲ್ಲೆ ಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ ಅಲ್ಲಿ ಕುಡಿಯುವ ನೀರು ಜಾನುವಾರಗಳಿಗೆ ಮೇವು ಬ್ಯಾಂಕ್ ತರೆದು ರೈತರು ಜನಸಾಮಾನ್ಯರು ಗುಳೆಹೂಗುವುದನ್ನು ತಪ್ಪಿಸಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಘೋಷಿಸಿ ರೈತರ ಆತ್ಮ ವಿಶ್ವಾಸ ಹೆಚ್ಚಿಸಲು ಮುಂದಾಗಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರಾದ ಸುರೇಶಪ್ಪ ಗರಡಿ ಮನಿ, ಮಾಲತೇಶ ಪೂಜಾರ, ಪರ್ವತ ಗೌಡ ಕುಸಗೂರು, ಹರಿಹರ ಗೌಡ ಪಾಟೀಲ, ಮಲ್ಲೇಶಪ್ಪ ಬಿಳಿಎಲಿ, ಕೊಟ್ರೇಶಪ್ಪ ಹುಬ್ಬಳ್ಳಿ, ಶಿರಾಜ ಶೇಖ ರಾಣೇಬೆನ್ನೂರು, ಗೌರಮ್ಮ ತೆಗ್ಗಿನ, ಅಂಜನಮ್ಮ ಹಾದರಗೇರಿ, ರೂಪಾ ನಾಯಕ, ದಿಲ್ಶಾದಬೀ ಶೇತ್ಸನದಿ, ಜಯಣ್ಣ ಮಾಗನೂರ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 