ದಿ. 16 ರಂದು ಸರಣಿ ಉಪನ್ಯಾಸ ಮಾಲೆ

ದಿ. 16 ರಂದು ಸರಣಿ ಉಪನ್ಯಾಸ ಮಾಲೆ Lecture series on 16th

ಧಾರವಾಡ 13: ಡಾ. ದ.ರಾ. ಬೇಂದ್ರೆ  ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ದಿ. 16 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಬೇಂದ್ರೆ ಭವನದಲ್ಲಿ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಸುವರ್ಣ ಮಹೋತ್ಸವದ ನಿಮಿತ್ತ ಏರಿ​‍್ಡಸಿರುವ ಸರಣಿ ಉಪನ್ಯಾಸ ಮಾಲೆಯಲ್ಲಿ ಹಿರಿಯ ಸಾಹಿತಿ, ಲೇಖಕರಾದ ಆನಂದ ಝುಂಜರವಾಡ ಅವರು “ನಾಕುತಂತಿ : ಕಲೆ ಹಾಗೂ ತತ್ವಗಳ ಸಖೀಗೀತ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವರು.   

ಟ್ರಸ್ಟ್‌ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸುವರು.  ಸರಣಿ ಉಪನ್ಯಾಸ ಮಾಲೆಯ ಸಂಚಾಲಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಪ್ರೊ.ಬಸವರಾಜ ಡೋಣೂರ ಹಾಗೂ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನೀಲಕ್ಕ ಸಿ. ಪಾಟೀಲ ಅವರು ಉಪಸ್ಥಿತರಿರುವರು ಎಂದು ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.