ರೋಟರಿಯಿಂದ ನಾಯಕತ್ವ ಆರೋಗ್ಯ ನಿರ್ವಹಣೆ ಶಿಬಿರ

ರೋಟರಿಯಿಂದ ನಾಯಕತ್ವ ಆರೋಗ್ಯ ನಿರ್ವಹಣೆ ಶಿಬಿರ Leadership Health Management Camp by Rotary

ಕಾಗವಾಡ 28 : ತಾಲೂಕಿನ ಮೋಳೆ ಗ್ರಾಮದ ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ರೋಟರಿ ಬೆಂಗಳೂರು, ಮಹಾಲಕ್ಷ್ಮಿ ಸೆಂಟ್ರಲ್ ಮತ್ತು ರೋಟರಿ ಬೆಂಗಳೂರು, ಹಲಸೂರು ಸಂಸ್ಥೆಗಳು ಜಂಟಿಯಾಗಿ 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸದಸ್ಯರಿಗೆ ರೋಟರಿ ಯುವ ನಾಯಕತ್ವ ಪ್ರಶಸ್ತಿಗಳು ನೀಡುವ ಕಾರ್ಯಕ್ರಮವನ್ನು ಶನಿವಾರ ದಿ. 27 ರಂದು ನಡೆಸಿದರು. 

ಕಾರ್ಯಕ್ರಮದಲ್ಲಿ 240 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಸಮುದಾಯ ಯೋಜನೆಗಳನ್ನು ಬೆಂಬಲಿಸುವ ರೋಟರಿಯ ಬಗ್ಗೆ ಒಳನೋಟ, ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಲು ಸಂವಾದಕರ ಪಾತ್ರವನ್ನು ಒದಗಿಸಲಾಯಿತು. ಕಾರ್ಯಕ್ರಮವನ್ನು ಸಮರ​‍್ಿತ ಮತ್ತು ಅನುಭವಿ 9 ಜನ ರೋಟರಿ ಸಹಾಯಕರಾದ ಮೋಹನ್ ಕುಮಾರ, ಶಿವಾನಂದ, ಡಾ. ಶ್ರೀಕಾಂತ, ಕೃಷ್ಣಮೂರ್ತಿ, ಮುರಳಿ ಸುಬ್ರಹ್ಮಣ್ಯ, ತಾತ್ಯಾಸಾಹೇಬ ಬಡಿಗೇರ,ಲಕ್ಷ್ಮಿ ಶಿವಾನಂದ, ದಾಕ್ಷಾಯಣಿ ಅವರು ಮಾರ್ಗದರ್ಶನ ಮಾಡಿದ ಆರ್‌ವೈಎಲ್‌ಎ ಕಾರ್ಯಕ್ರಮವು 10 ನೇ ತರಗತಿಯ ನಂತರ ವೃತ್ತಿ ಸಮಾಲೋಚನೆ ಮತ್ತು ಶೈಕ್ಷಣಿಕ ಆಯ್ಕೆಗಳ ವಿಷಯಗಳನ್ನು ಒಳಗೊಂಡಿತ್ತು. 

ಇದು ಸುಸ್ಥಿರತೆ, ನಾಯಕತ್ವದ ಮೂಲಭೂತ ಅಂಶಗಳು, ಗುರಿ ನಿಗಧಿ, ಸಂವಹನ ಕೌಶಲ್ಯದ ಪ್ರಾಮುಖ್ಯತೆ, ತಂಡ ನಿರ್ಮಾಣ, ಸೃಜನಶೀಲತೆ, ಭಯವನ್ನು ನಿವಾರಿಸುವುದು ಮತ್ತು ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸುವುದು ಮುಂತಾದ ವಿಷಯಗಳನ್ನು ಸಹ ಒಳಗೊಂಡಿದೆ. ವಿದ್ಯಾರ್ಥಿಗಳು ಹಲವಾರು ಸಮಸ್ಯೆ ಪರಿಹಾರ, ಹಾಗೂ ವಿಶೇಷವಾಗಿ ಸೌಮ್ಯ ಶ್ರೀಕಾಂತ ವಿದ್ಯಾರ್ಥಿನಿಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಈ ವೇಳೆ ಭಾಗವಹಸಿದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಈ ವೇಳೆ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.