ಸ್ಥಳೀಯ ಚುನಾವಣೆಗೆ ನಾಯಕರು ಪಕ್ಷದ ಸಂಘಟನೆಗೆ ಶ್ರಮಿಸಬೇಕು
Leaders should work hard to organize the party for local elections
ಹಾವೇರಿ 17: ಜಿಲ್ಲೆಯಲ್ಲಿ ಎಲ್ಲಾ ಸ್ಥಳೀಯ ಚುನಾವಣೆ ಎದುರಿಸಲು ಎಲ್ಲಾ ಗ್ರಾಮ-ತಾಲ್ಲೂಕ ಸಮಿತಿಗಳನ್ನು ರಚನೆಮಾಡಲಾಗುತ್ತಿದ್ದು, ಜವಾಬ್ದಾರಿ ತೆಗೆದುಕೊಂಡ ನಾಯಕರು ಪಕ್ಷ ಸಂಘಟನೆ ಮಾಡಲು ಶ್ರಮಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಲ್ಇಂಡಿಯಾ ಬಹುಜನ ಸಮಾಜ ಪಕ್ಷದಜಿಲ್ಲಾ ಮಟ್ಟದ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಮಾಡಿ ಅವರಿಗೆ ಶುಭಕೋರಿ ಮಾತನಾಡಿದರು.
ಇದೇ ಅವಧಿಯಲ್ಲಿ ರಾಣೇಬೆನ್ನೂರ ತಾಲ್ಲೂಕಾಧ್ಯಕ್ಷರಾಗಿ ಜಿ.ಕೆ. ಗಣೇಶ, ಹಿರೇಕೆರೂರ ತಾಲ್ಲೂಕಾಧ್ಯಕ್ಷರಾಗಿ ಲೋಹಿತ ಓಲೇಕಾರ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶಂಭುಲಿಂಗಯ್ಯ ಹನಗೋಡಿಮಠ, ರಾಜಪ್ಪ ಉಪ್ಪಾರ, ವಿಜಯಕುಮಾರ ಬೇನಕನವಾರಿ, ಲಿಯಾಕತ್ ತಿಳವಳ್ಳಿ, ಮೋಹಿನ್ ಮುಲ್ಲಾ, ಎಸ್.ಎಂ.ಗಣಜೂರ, ಎಂ.ಕೆ.ಮಖಬೂಲ್, ಇಶಾಕ ಕಾಗಿನೆಲೆ, ಅಜೀಮಸಾಬ ಮನ್ನಂಗಿ, ಗುಡ್ಡಪ್ಪ ಚಿಕ್ಕಪ್ಪನವರ, ದಾದಾಪೀರ ಮತ್ತಿಹಳ್ಳಿ,ಬಿ.ಸಿ.ಲಂಬಿ ಸೇರಿದಂತೆ ಪಕ್ಷದ ಮುಖಂಡರು ಮತ್ತುಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 