ಮುಖಂಡ ರುದ್ರಗೌಡರಿಗೆ ಶಾಸಕರಿಂದ ಸನ್ಮಾನ

ಮುಖಂಡ ರುದ್ರಗೌಡರಿಗೆ ಶಾಸಕರಿಂದ ಸನ್ಮಾನ Leader Rudragowda honored by MLAs

  ತಾಳಿಕೋಟಿ  27: ತಾಲೂಕಿನ ಚಬನೂರ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಸುಮಾರು 10 ಕೋಟಿಯಷ್ಟು ಅನುದಾನವನ್ನು ತಂದಿರುವ ಗ್ರಾಮದ ಮುಖಂಡ ರುದ್ರಗೌಡ ಪಾಟೀಲ ಇವರನ್ನು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸನ್ಮಾನಿಸಿ ಗೌರವಿಸಿದರು. ಜ್ಯೋತಿಷ್ಯ ರತ್ನ ಪರಮ ಪೂಜ್ಯ ಶ್ರೀರಾಮ ಲಿಂಗಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ತಾಪಂ ಇಓ ಅನಸೂಯಾ ಚಲವಾದಿ,ಎಇಇ ಆನಂದಸ್ವಾಮಿ,ವಿಲಾಸ್ ರಾಠೋಡ,ಮುಖಂಡರಾದ ಸಂಗನಗೌಡ ಪಾಟೀಲ ಮಡುಸೌಕಾರ ಬಿರಾದಾರ ಮತ್ತಿತರರು.