ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ವಕೀಲರು ಮುಂದಾಗಬೇಕು : ಎಚ್‌.ಪಿ. ಸಂದೇಶ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ವಕೀಲರು ಮುಂದಾಗಬೇಕು : ಎಚ್‌.ಪಿ. ಸಂದೇಶ Lawyers should come forward to provide justice to the most vulnerable person in society: H.P. Sandes

 ಧಾರವಾಡ 14: ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಕಾನೂನು ಸೇವೆಯ ಪಾತ್ರ ಮಹತ್ವದ್ದಾಗಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಉಳಿಸುವ ಜವಾಬ್ದಾರಿ ವಕೀಲರ ಮೇಲಿದೆ. ಕಕ್ಷಿದಾರರು ನ್ಯಾಯದ ಮೇಲೆ ವಿಶ್ವಾಸ ಇಟ್ಟು ನ್ಯಾಯಾಲಯಕ್ಕೆ ಬಂದಾಗ ಅವರಿಗೆ ನ್ಯಾಯ ಒದಗಿಸುವುದು ವಕೀಲರ ಕರ್ತವ್ಯವಾಗಿದೆ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಆಡಳಿತ ನ್ಯಾಯಾಧೀಶ ಎಚ್‌.ಪಿ. ಸಂದೇಶ ಅವರು ಹೇಳಿದರು. ಅವರು ಇಂದು (ಜೂ.14) ಬೆಳಿಗ್ಗೆ ಕೃಷಿ ನಗರ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನ ಕೇಂದ್ರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹುಬ್ಬಳ್ಳಿ ಕಾನೂನು ಕಾಲೇಜು ಧಾರವಾಡ ವಲಯದ ಅಡಿಯಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಧಾರವಾಡ ತರಗತಿಯಿಂದ ನ್ಯಾಯಾಲಯದ ಕೋಣೆಗೆ 4 ನೇ ವಲಯ ಕಾರ್ಯಾಗಾರಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದೆ. ಕಾನೂನು ವಿದ್ಯಾರ್ಥಿ ಸಾಮಾಜಿಕ ನ್ಯಾಯಕ್ಕಾಗಿ ವೇಗವರ್ಧಕಗಳನ್ನು ಹೊಂದಿದ್ದಾನೆ ಎಂದು ಉದ್ಘಾಟಿಸಿ ಮಾತನಾಡಿದರು.