ಲಕ್ಷ್ಮೀ ಜಾತ್ರೆ: ಅಂತರ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತು
Lakshmi Jatre
ಮಾಂಜರಿ 10: ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಲಕ್ಷ್ಮೀ ಜಾತ್ರೆಯ ಅಂಗವಾಗಿ ಏರಿ್ಡಸಿದ್ದ ಅಂತರ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಮಾನಕಾಪುರ ಗ್ರಾಮದ ದಾದಾ ಮಹಾರಾಜ ಎಂಬುವರ ಎತ್ತಿನಗಾಡಿ ಪ್ರಥಮ ಸ್ಥಾನ ಪಡೆದು 20,001 ರೂ ಬಹುಮಾನ ತನ್ನದಾಗಿಸಿಕೊಂಡಿತು.
ಪೇಲು ಹರೇಲ ಆಡಿ ದ್ವಿತೀಯ 15001 ಹಾಗೂ ಹರ್ಷದ ವಾಡಕರ ಎಂಬುವರ ಗಾಡಿ ತೃತೀಯ ಸ್ಥಾನ ಪಡೆದು 10,001 ರೂ ಬಹುಮಾನ ಪಡೆದುಕೊಂಡರು. ಕುದುರೆ ಗಾಡಿ ಶರ್ಯತ್ತಿನಲ್ಲಿ ಯಡೂರವಾಡಿಯ ಚಿದಾನಂದ ಇಂಗಳೆ ಪ್ರಥಮ, ನಿಖಿಲ ಮಾನೆ ಯಡೂರವಾಡಿ ದ್ವಿತೀಯ ಮತ್ತು ಸೋಮನಾಥ ಹರೇಲ ಮಾನಕಾಪುರ ಎಂಬುವರ ಗಾಡಿ ತೃತೀಯ ಸ್ಥಾನ ಬಹುಮಾನ ಪಡೆದರು.ಎತ್ತು ಹಿಡಿದುಕೊಂಡು ಓಡುವ ಸ್ಪರ್ಧೆಯಲ್ಲಿ ಸೊನ್ಯಾ ನಾಗರಾಳ ಪ್ರಥಮ, ಹರನ್ಯಾ ನಾಗರಾಳ ದ್ವಿತೀಯ ಮತ್ತು ಸಂಕೇತ ಮಾನೆ ಲೋಕುರ ತೃತೀಯ ಸ್ಥಾನ ಪಡೆದರು. ಓಡುವ ಸ್ಪರ್ಧೆಯಲ್ಲಿ ರಾಹುಲ ಚವ್ಹಾಣ ಸಾಂಗಲಿ ಪ್ರಥಮ, ಶಿವಾನಂದ ನಾಯಿಕ ದ್ವಿತೀಯ ಮತ್ತು ಶಹಾಜಿ ಧನಗರ ಎಂಬುವರು ತೃತೀಯ ಸ್ಥಾನ ಬಹುಮಾನ ಪಡೆದರು. ವಿಜೇತರಿಗೆ ಕಮಿಟಿ ಸದಸ್ಯರು ಹಾಗೂ ಗ್ರಾಮದ ಗಣ್ಯರು ಬಹುಮಾನ ವಿತರಿಸಿದರು. ಶರ್ಯತ್ತು ವೀಕ್ಷಿಸಲು ಗಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸದಾಶಿವ ಪಾಟೀಲ, ದತ್ತಾ ಪವಾರ,ದೀಪಕ ಮಾನೆ,ಸದಾಶಿವ ಸಾವಳೆ,ರಾಜು ಚವ್ಹಾನ,ಕಿಟಲ್ ಯಳವಂತೆ,ಗುರಲಿಂಗ ಮಾನೆ,ಪಿಂಟು ಚುಪಡೆ,ಬಾಳಕೃಷ್ಣ ಮಾನೆ, ರಾಜು ಖಾರಬಾರಿ, ವಿನಾಯಕ ಮಾನೆ, ಬಾಪು ಪೂಜಾರಿ, ಕುಮಾರ ಸನದಿ, ಸಂತೋಷ ಬೆಡಗೆ, ಕೆದಾರಿ ಇಂಗಳೆ,ಅಪ್ಪು ಕಾನಡೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 