ಕುವೆಂಪು ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
Kuvempu Institute's meritorious students honored
ತಾಳಿಕೋಟಿ 11: ತಾಲೂಕಿನ ಬಳಗಾನೂರ ಕ್ರಾಸ್ ನಲ್ಲಿರುವ ಕುವೆಂಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಇದರ ಅಡಿಯಲ್ಲಿ ನಡೆಯುತ್ತಿರುವ ಕುವೆಂಪು ಶಿಕ್ಷಣ ಸಂಸ್ಥೆಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಕಳೆದ ಬಾರಿ ತೋರಿದ ಉತ್ತಮ ಸಾಧನೆಗಾಗಿ ಸನ್ಮಾನಿಸಲಾಯಿತು. ಅಧ್ಯಕ್ಷರಾದ ಬಸವರಾಜ್ ಎನ್.ನಾಯ್ಕೋಡಿ ಹಾಗೂ ಅವರ ಧರ್ಮಪತ್ನಿ ಶಾರದಾ ಬಿ ನಾಯ್ಕೋಡಿ ಇವರನ್ನು ಶೈಕ್ಷಣಿಕ ಸೇವೆಗಾಗಿ ವೇದಿಕೆಯ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಕ್ಕೇರಾ ಭಾವೈಕ್ಯತಾ ಶಿಶುನಾಳ ಶರೀಫ ಮಠದ ಸಂತ ಶ್ರೀ ಶರೀಫ ಶಿವಯೋಗಿಗಳು ಹಾಗೂ ಬಳಗಾನೂರದ ಮಾತೃಶ್ರೀ ಮಂಜುಳಾ ಅಮ್ಮನವರು ಸಾನಿಧ್ಯ ವಹಿಸಿದ್ದರು. ಗಣ್ಯರಾದ ನಿಂಗನಗೌಡ ಪಾಟೀಲ(ಬಳಗಾನೂರ),ಕಾಶಿನಾಥ ತಿ. ಸಜ್ಜನ, ಮಂದಾಕಿನಿ ಷಣ್ಮುಖಪ್ಪ ಅಮ್ಮನವರು, ಉಪಾಧ್ಯಕ್ಷ ಮಧು ಬಿ.ನಾಯ್ಕೋಡಿ, ಪ್ರಧಾನ ಕಾರ್ಯದರ್ಶಿ ಮನು ಬಿ. ನಾಯ್ಕೋಡಿ, ಉಪನ್ಯಾಸಕ ಎಚ್.ವಿ.ಬಾಗೇವಾಡಿ ನಿವೃತ್ತ ಶಿಕ್ಷಕ ಎಂ.ಎಸ್.ಹುಲ್ಲೂರ, ಪ್ರಾಚಾರ್ಯ ಸವಿತಾ ಎಂ.ಕಾಗಿ, ಜಯಶ್ರೀ ಎಂ.ಕಾಗಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು 