ಸಮೃದ್ಧ ಮಳೆ - ಬೆಳೆಗಾಗಿ ಸಿದ್ದೇಶ್ವರ ಸ್ವಾಮಿಗೆ ಕುಂಭ ಅಭಿಷೇಕ
Kumbh Abhishekam to Siddheshwara Swamy for abundant rain - crops
ಲೋಕದರ್ಶನ ವರದಿ
ಹೂವಿನಹಡಗಲಿ 18: ತಾಲ್ಲೂಕಿನ ಹೊಳಗುಂದಿ ಗ್ರಾಮದಲ್ಲಿ ಸಮೃದ್ಧ ಮಳೆ, ಬೆಳೆಗಾಗಿ ಸಂಕಲ್ಪಿಸಿ ಸ್ಥಳೀಯರು ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಸೋಮವಾರ ನೆರವೇರಿಸಿದರು.ಅಳವಂಡಿ ಕಟ್ಟಿಮನಿ ಹಿರೇಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ದಲ್ಲಿ ಬಾವಿಹಳ್ಳಿ ಗ್ರಾಮದ ಕರಿಬಸವೇಶ್ವರ ಸ್ವಾಮಿಯ ದೇವಸ್ಥಾನ ದಿಂದ ವಿಶೇಷ ಗಂಗಾ ಪೂಜೆಯನ್ನು ನೆರವೇರಿತು ನಂತರ ಮಹಿಳೆಯರಿಂದ 111 ಕಳಸ ಮತ್ತು 151 ಪೂರ್ಣ ಕುಂಭಗಳು ಮೆರವಣಿಗೆ ಮೂಲಕ ತಂದು ಸಿದ್ದೇಶ್ವರ ಸ್ವಾಮಿಗೆ ಜಲ ಅಭಿಷೇಕ ಮಾಡಿದರು. ಮೆರವಣಿಗೆಯಲ್ಲಿ ಕಳಸದಾರತಿ, ಮಂಗಳವಾದ್ಯ , ಸಮಾಳ, ನಂದಿಕೋಲು ಮೆರಗು ತಂದವು. ಹೆಚ್.ಎಂ.ಮಲ್ಲಿಕಾರ್ಜುನಯ್ಯ, ಯು.ಎಂ.ಮಹಾಸ್ವಾಮಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಿದ್ದೇಶ್ವರ ಕಮಿಟಿ ಪದಾಧಿಕಾರಿಗಳು,ಬಾವಿಹಳ್ಳಿ, ಹೊಳಗುಂದಿ ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ಅನ್ನ ಸಂತರೆ್ಣ ನಡೆಯಿತು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 