ಕುಮಾರೇಶ್ವರ ಜಯಂತಿ ಪ್ರವಚನ ಕಾರ್ಯಕ್ರಮ

ಕುಮಾರೇಶ್ವರ ಜಯಂತಿ ಪ್ರವಚನ ಕಾರ್ಯಕ್ರಮ Kumareshwara Jayanti discourse program

ಗಂಗಾವತಿ: ನಗರದಲ್ಲಿ ನಡೆಯುತ್ತಿರುವ ಶ್ರೀ.ಲಿಂ.ಹಾನಗಲ್ ಕುಮಾರೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಮನ್ ಮಹಾರಾಜ ನಿರಂಜನ ಜಗ ಜದ್ಘುರು ಡಾ.ಗುರುಸಿದ್ಧ ರಾಜ ಯೋಗೆಂದ್ರ  ಮಹಾಸ್ವಾಮಿಗಳು ನಗರಕ್ಕೆ ಆಗಮಿಸಿದರು.

ಈ ಸಂಧರ್ಭದಲ್ಲಿ ಮುಂಡರಗಿ ಅನ್ನದಾನೇಶ್ವರ ಮಠದ ಶ್ರೀಗಳು ವಿರುಪಾಕ್ಷಪ್ಪ ಸಿಂಗನಾಳ,ಬಸವಂತ ಪಾಟೀಲ್, ಸುರೇಶ್ ಪಾಟೀಲ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾ ಗಂಗಾವತಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಉಪಾಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹಿರೇಮಠ ಶ್ರೀಗಳನ್ನು ಸ್ವಾಗತಿಸಿದರು.