ಗೋರಖ್ಪುರ ಎಡಿಜಿಪಿಗೆ ಸನ್ಮಾನ
Kudos to Gorakhpur ADGP
ಹುಬ್ಬಳ್ಳಿ 31: ನಗರದ ಜೈನ್ ಮರುಧರ್ ಸಂಘದಲ್ಲಿ ಚಾತುರ್ಮಾಸ ಕೈಗೊಂಡಿರುವ ಸಾಧ್ವಿ ಮೋಕ್ಷ ಮಾಲಾಶ್ರೀ ಅವರ ಪೂರ್ವಾಶ್ರಮದ ಸಹೋದರರು ಹಾಗೂ ಉತ್ತರ ಪ್ರದೇಶ ಕೆಡರ್ನ ಗೋರಖ್ಪುರ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ ಮಾಂಗೀಲಾಲಜಿ ಜೈನ್ (ಆಹೋರ್) ದಂಪತಿಗಳು ಹುಬ್ಬಳ್ಳಿಗೆ ಆಗಮಿಸಿದ್ದರು.
ಸಾಧ್ವೀಜಿಯವರನ್ನು ಭೇಟಿಯಾಗಿ ದರ್ಶನ ವಂದನೆ ನೆರವೇರಿಸಿ ಪ್ರವಚನ ಆಲಿಸಿದರಲ್ಲದೇ ಮರುಧರ್ ಸಂಘದಿಂದ ನಡೆಯುತ್ತಿರುವ ಧರ್ಮಕಾರ್ಯ ಮತ್ತು ಸಮಾಜಸೇವಾ ಚಟುವಟಿಕೆಗಳನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಇಂದರ್ಮಲ್ ಜೈನ್, ಕಾರ್ಯದರ್ಶಿ ದಿನೇಶ ಸಂಘವಿ, ಟ್ರಸ್ಟಿಗಳಾದ ಚಂಪಲಾಲ್ ಜೈನ್, ವೀರಚಂದ್ ಜೈನ್, ಪಾರಸಮಲ್ ಭನ್ಸಾಲಿ, ವೀನೀತ್ ಜೈನ್, ಸುರೇಶ್ ಜೈನ್ ಮತ್ತು ಸಮಾಜಸೇವಕರು ಹಾಗೂ ಪ್ರಧಾನಮಂತ್ರಿ 15 ಸೂತ್ರಿಯ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 