ರಾಮ ಮಂದಿರದಲ್ಲಿ ವಿಜ್ರಂಭಣೆಯಿಂದ ಆಚರಿಸಿದ ಕೃಷ್ಣಾಷ್ಠಮಿ
Krishna Ashtami celebrated with grandeur at Ram Mandir
ಅಥಣಿ, 19 ; ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಅಥಣಿ ಶ್ರೀರಾಮ ಮಂದಿರದಲ್ಲಿ ಬಾಲ ಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಸುಮಂಗಲೆಯರು ಹಾಡು ಹಾಡಿ ಅಲಂಕೃತ ತೊಟ್ಟಿಲು ತೂಗಿದರು. ವಿವಿಧ ಹೂ ಮತ್ತು ಹೂ ಮಾಲೆಗಳಿಂದ, ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿದ ಕೃಷ್ಣ ಮತ್ತು ರಾಧೆಯ ಮೂರ್ತಿಗಳನ್ನು ಅಲಂಕೃತ ವೇದಿಕೆ ಮೇಲಿಟ್ಟು ಭಕ್ತಿಯಿಂದ ಪೂಜಿಸಿದರು.
ವೇದಿಕೆ ಮೇಲೆ ಕೃಷ್ಣನಿಗೆ ಇಷ್ಟವಾದ ಬೆಣ್ಣೆ, ಹಣ್ಣು, ಹಾಲು, ಮೊಸರು, ಶುಂಠಿ, ಸಕ್ಕರೆ ಇಟ್ಟು ನೈವೆದ್ಯ ತೋರಿಸಿದರು. ಕೃಷ್ಣಾಷ್ಠಮಿ ನಿಮಿತ್ಯ ಭಜನೆ ಪದಗಳನ್ನು ಹಾಡಿದರು. ವೇದಿಕೆ ಮೇಲೆ ವಸುದೇವ, ದೇವಕಿ, ಬಲರಾಮರ ಚಿಕ್ಕ ಚಿಕ್ಕ ಮೂರ್ತಿಗಳನ್ನಿಟ್ಟು ಪುಟ್ಟ ಗೋಕುಲವನ್ನೇ ನಿರ್ಮಾಣ ಮಾಡಿದ್ದರು.
ಮರುದಿನ ಪಾರಣಿಯಂದು ಸಂಜೆ ಹಾಡು, ಭಜನೆ ಮಾಡಿ ಕೋಲಾಟ ಆಡಿ ಕುಣಿದು ಕುಪ್ಪಳಿಸಿ ಹಾಲು, ಮೊಸರು, ಬೆಣ್ಣೆಯಿಂದ ತುಂಬಿದ್ದ ಗಡಿಗೆಯನ್ನು ಒಡೆಯುವ ಮೂಲಕ ಗೋಪಾಳ ಕಾವಲಿ ಆಚರಿಸಿ ವಿಜ್ರಂಭಿಸಿದರು. ಕೃಷ್ಣಾಷ್ಠಮಿ ಕಾರ್ಯಕ್ರಮಗಳೆಲ್ಲವು ಲಕ್ಷ್ಮಣ ರಾಮದಾಸಿ, ಕ್ಷಮಾ ರಾಮದಾಸಿ ನೇತೃತ್ವದಲ್ಲಿ ನಡೆದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 