ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಆಶ್ರಯದಲ್ಲಿ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಕಿರಣ್ ಬಾಕಳೆ

ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಆಶ್ರಯದಲ್ಲಿ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಕಿರಣ್ ಬಾಕಳೆ Kiran Bakale receives Karnataka Chhaya Ratna Award under the auspices of the Photo and Videographers

ಹುಬ್ಬಳ್ಳಿ 17: ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘ ಸಂಘದ ಆಶ್ರಯದಲ್ಲಿ ಛಾಯಾಗ್ರಹಣ ಹಾಗೂ ವಿಡಿಯೋ ಛಾಯಾಗ್ರಹಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕರು ಹಾಗೂ ವಿಡಿಯೋ ಗ್ರಾಹಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ . ಇದೇ ತಿಂಗಳು  27 ಜೂನ್ 2025 ಶುಕ್ರವಾರ ದಿನದಂದು  ಬೆಂಗಳೂರು ಅರಮನೆಯ ಮೈದಾನದಲ್ಲಿ  ಅಂತರಾಷ್ಟ್ರೀಯ ಫೋಟೋ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ  ಧಾರವಾಡ  ಜಿಲ್ಲೆಯ ಹಿರಿಯ ಛಾಯಾಗ್ರಹಕರು ಹಾಗೂ ವಿಡಿಯೋ ಛಾಯಾಗ್ರಾಹಕರನ್ನ ಆಯ್ಕೆ ಮಾಡಿ ಅವರಿಗೆ" ಕರ್ನಾಟಕ ಛಾಯಾ ರತ್ನ ಪ್ರಶಸ್ತಿ" ಪ್ರದಾನ ಮಾಡಲಿದ್ದೇವೆ. 

 ಈ ಸ್ಮರಣೀಯ ಕಾರ್ಯಕ್ರಮ ಮಧ್ಯಾಹ್ನ 11:00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ರಾಜಕೀಯ ನಾಯಕರು ಹಿರಿಯ ಪತ್ರಕರ್ತರು ಸೇರಿದಂತೆ   ಪ್ರಮುಖರು ಆಗಮಿಸಲಿದ್ದಾರೆ. ಈ ಬಾರಿ ವಿಶೇಷವಾಗಿ ಮಾಧ್ಯಮ ಮತ್ತು ಛಾಯಾಗ್ರಹಣ ಕ್ಷೇತ್ರದ 5 ಹಿರಿಯರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಮಾಧ್ಯಮ ಕ್ಷೇತ್ರದಿಂದ ಹುಬ್ಬಳ್ಳಿಯ  ಹೊಸ ದಿಗಂತ  ಪತ್ರಿಕೆಯ ಛಾಯಾಗ್ರಹಕ ಮಂಜುನಾಥ ಗಣಪತಸಾ ಜರತರಾಘರ್. ಪ್ರಜಾವಾಣಿಯ ಛಾಯಾಗ್ರಾಹಕ ಗುರು ಹಬೀಬ. ಟಿವಿ9 ವಾರ್ತೆಯ ವಿಡಿಯೋ ಛಾಯಾಗ್ರಹಶಿವಾಜಿ ಲಾತೂರಕರ. ಛಾಯಾಗ್ರಹಣ ಕ್ಷೇತ್ರದಿಂದ: ವಜಿರ್ ಅಹಮ್ಮದ್. ವಜಿರ್ ವಿಡಿಯೋಗ್ರಾಫಿ. ತಬಿಬಲ್ಯಾಂಡ್ಪ್ರವೀಣ್ ಹಣಗಿ. ಹಣಗಿ ಸ್ಟುಡಿಯೋ ಕೇಶವಾಪುರ ಪ್ರಶಸ್ತಿ ನೀಡಲು ತೀರ್ಮಾನಸಿದ್ದೇವೆ ಎಂದು ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ತಿಳಿಸಿದ್ದಾರೆ.