ಖನ್ನೂರ ವಿದ್ಯಾನಿಕೇತನ : ವಾಣಿಜ್ಯ ವಿದ್ಯಾರ್ಥಿಗಳ ಸಾಧನೆ

ಖನ್ನೂರ ವಿದ್ಯಾನಿಕೇತನ : ವಾಣಿಜ್ಯ ವಿದ್ಯಾರ್ಥಿಗಳ ಸಾಧನೆ   Khannur Vidyaniketan: Achievements of commerce students

ರಾಣೇಬೆನ್ನೂರ 30: ನ 29 ಇಲ್ಲಿನ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕೆ.ಎಫ್‌. ಪಾಟೀಲ್, ಬಿಬಿಎ ಕಾಲೇಜಿನಲ್ಲಿ " ಕಲಾಂತರ -2025" ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ  ಪಾಲ್ಗೊಂಡಿದ್ದ ನಗರದ ಖನ್ನೂರು ವಿದ್ಯಾನಿಕೇತನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರದರ್ಶನ  ಸಾಧನೆ ಮೆರೆದು "ಜನರಲ್ ಚಾಂಪಿಯನ್ಶಿಪ್ " ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಗೌರವಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾಕ್ಟರ್ ಪ್ರವೀಣ ಕುಮಾರ ಎಂ ಖನ್ನೂರ, ಸಿಇಒ, ಡಾ. ಶೈಲ ಪಿ. ಖನ್ನೂರ, ಆಡಳಿತಾಧಿಕಾರಿ ನಾಗೇಶ್ ಮುರುಡಣ್ಣನವರ, ಪ್ರಾಚಾರ್ಯ ಕೆ. ಸುಬ್ಬರಾವ್ ಸೇರಿದಂತೆ ವಾಣಿಜ್ಯ ವಿಭಾಗದ ಉಪನ್ಯಾಸಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.