ಜನತಾಪುರ ಕಾವೇರಿಗೆ ಕರ್ನಾಟಕ ನವರತ್ನ ರಾಜ್ಯ ಪ್ರಶಸ್ತಿ

ಜನತಾಪುರ ಕಾವೇರಿಗೆ ಕರ್ನಾಟಕ ನವರತ್ನ ರಾಜ್ಯ ಪ್ರಶಸ್ತಿ Karnataka Navaratna State Award for Janathapura Kaveri


ಗಂಗಾವತಿ 07:  ಸಮಾಜ ಸೇವೆ ಹಾಗು ಸಾಹಿತ್ಯ ಸೇವೆಗಾಗಿ ಜನತಾಪುರ ಕಾವೇರಿ ಇವರಿಗೆ ಹಿರೇಮನ್ನಾಪುರ ಸೌರಭ ಸಾಂಸ್ಕೃತಿಕ ಕಲಾ ಬಳಗದಿಂದ ಕರ್ನಾಟಕ ನವರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರತಿಭಾವಂತರಾದ ಇವರು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.ಸಿಂಧನೂರಿನ ಕಾರುಣ್ಯ ಆಶ್ರಮದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ. ಈ ಸಂದರ್ಭದಲಿ ಸಂಸ್ಥೆಯ ಅಧ್ಯಕ್ಷ ರಹೇಮಾನ್‌ಸಾಬ್ ಕೋಳುರು, ಉಪಾಧ್ಯಕ್ಷ ಭೀಮಸೇನ್‌ರಾವ್ ಕುಲಕರ್ಣಿ, ಪದಾಧಿಕಾರಿಗಳಾದ ಬಸೀರ್ ಆಹ್ಮದ್, ಹನುಮಣ್ಣ, ವಿರುಪಾಕ್ಷಿ, ಅಮೀನ್ ಎಂ.ಎಂ. ಕೊಡಗು, ಆಶ್ರಮದ ಅಧ್ಯಕ್ಷ ಚನ್ನಬಸಯ್ಯ ಹಿರೇಮಠ, ಕಲಾವಿದರಾದ ಮಲ್ಲಿಕಾರ್ಜುನ ಇತರರಿದ್ದರು.