ಕಾರಹುಣ್ಣಿಮೆ ಬಸವಣ್ಣನ ಪೂಜೆಯ ಕೃಷಿ ಸಂಸ್ಕೃತಿಯ ಸಂಕೇತ: ಗೌಡಶಿವಣ್ಣನವರ
Karahunnime is a symbol of the farming culture of worshiping Basavanna: Gaudashivannavara
ರಾಣೇಬೆನ್ನೂರು 17 : ಕಾರ ಹುಣ್ಣಿಮೆ ರೈತಾಪಿ ವರ್ಗದವರ ಮತ್ತು ರೈತ ಸಮುದಾಯದ ಭಕ್ತಿ ಭಾವ ಮತ್ತು ಸಂಭ್ರಮದ ಹಬ್ಬವಾಗಿ ಆಚರಿಸುವುದು ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು, ನಗರದ ಯುವ ರೈತ, ಜೆಡಿಎಸ್ ಜಿಲ್ಲಾಧ್ಯಕ ಮಂಜುನಾಥ ಗೌಡ ಶಿವಣ್ಣನವರ್ ಹೇಳಿದರು.
ಅವರು, ಸೋಮವಾರ ಇಲ್ಲಿನ ಕುರುಬಗೆರೆಯ, ತಮ್ಮ ಕೃಷಿ ಕಾಯಕದ ಮನೆ ಮುಂದೆ, ರೈತರ ಜೀವನಾಡಿ, ಬಸವಣ್ಣನಿಗೆ ಅತ್ಯಂತ ಭಕ್ತಿ ಭಾವದಿ ಪೂಜಿಸಲ್ಲಿಸಿ, ಸಂಭ್ರಮಿಸಿ, ಮಾತನಾಡಿದರು. ಓದು ವಕ್ಕಾಲು, ಬುದ್ಧಿ ಮುಕ್ಕಾಲು, ರೈತ ವಕ್ಕಿದರೇ ಜಗವೆಲ್ಲ ನಕ್ಕು ನಲಿಯುವುದು ಎನ್ನುವ ನಮ್ಮ ಪೂರ್ವಜರ ವಾಣಿ ಇಂದಿಗೂ ಸತ್ಯವಾಗಿದೆ ಎನ್ನುವುದಕ್ಕೆ, ನಾಡಿನ ರೈತರ ಕಾರ ಹುಣ್ಣಿಮೆಯ ದಿವಸ ಅತ್ಯಂತ ಸಡಗರ ಮತ್ತು ಸಂಭ್ರಮದಿ ಆಚರಿಸುವ ಹಬ್ಬವೇ ಇಂದಿಗೂ ಸಾಕ್ಷಿಯಾಗಿದೆ ಎಂದರು.
ಪ್ರಸ್ತುತ ರೈತರ ಮೊಗದಲ್ಲಿ ನಗೆಯ ಮಂದಹಾಸ ಬೀರಿದೆ. ನೆಲಕಪ್ಪಳಿಸಿರುವ ಮಳೆ, ಇಳೆವರೆಗೂ ಬಂದಿದೆ. ಇದೇ ರೀತಿ ಸಂದರ್ಭ ಕ್ಕನುಸಾರವಾಗಿ, ಮಳೆ ಬೀಳಬೇಕು, ಹಚ್ಚ ಹಸಿರಿನ ಫೈರು ರೈತನ ಮೊಗದಲ್ಲಿ ನಗು ತರುವಂತೆ ಇರಬೇಕು ಎನ್ನುವ ಪ್ರಾರ್ಥನೆ ನಮ್ಮದಾಗಿದೆ ಎಂದು ಪೂಜೆಯ ಮಹತ್ವವನ್ನು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಬಹು ವಿಜೃಂಭಣೆಯಿಂದ ನಡೆದ ಕಾರ ಹುಣ್ಣಿಮೆಯ ಬಸವಣ್ಣನ ಪೂಜೆಯ ಈ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಹಿರಿಯ ಮತ್ತು ಕಿರಿಯ ಸದಸ್ಯರು, ಬಂಧುಗಳು, ರೈತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 