ತಡವಲಗಾ ಗ್ರಾಮದಲ್ಲಿ ಕಾರಹುಣ್ಣಿಮೆ ಸಂಭ್ರಮ : ಎತ್ತುಗಳ ಅದ್ದೂರಿ ಮೆರವಣಿಗೆ
Karahunnima celebrations in Tadavalaga village : grand bull procession
ಇಂಡಿ: ತಾಲ್ಲೂಕಿನಾದ್ಯಂತ ಜೂನ್ 29 ರಂದು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರಂತೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿಯೂ ಕಾರಹುಣ್ಣಿಮೆಯ ನಿಮಿತ್ತವಾಗಿ ಎತ್ತುಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ಗ್ರಾಮದ ರೈತರು ತಮ್ಮ ಎತ್ತುಗಳನ್ನು ಸುಂದರವಾಗಿ ಅಲಂಕರಿಸಿ, ವಾದ್ಯ ವೃಂದದ ಸಂಗೀತ ಮತ್ತು ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಹಬ್ಬವನ್ನು ರೈತರ ಹಬ್ಬವೆಂದೂ ಕರೆಯಲಾಗುತ್ತದೆ.
ಬೇಸಿಗೆ ಮುಗಿದು ಮುಂಗಾರು ಮಳೆ ಆರಂಭವಾಗುವ ಸಂದರ್ಭದಲ್ಲಿ ಬರುವ ಈ ಹಬ್ಬದಂದು ರೈತರು ಎತ್ತುಗಳನ್ನು ಪೂಜಿಸಿ ಗೌರವಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ವಿಶೇಷ ಮಹತ್ವ ಹೊಂದಿದ್ದು, ಮಹಾಲಕ್ಷ್ಮೀ ಯೋಗ ರೂಪಗೊಳ್ಳುತ್ತದೆ ಎಂದು ನಂಬಿಕೆ ಇದೆ. ಚಂದ್ರನು ವೃಶ್ಚಿಕ ರಾಶಿಗೆ ಸಂಚಾರ ಮಾಡುವುದರಿಂದ ಈ ಯೋಗ ಉಂಟಾಗುತ್ತದೆ ಎಂಬ ಅಭಿಪ್ರಾಯವಿದೆ. ಈ ಯೋಗದಿಂದ ಕೆಲ ರಾಶಿಗಳಿಗೆ ಆರ್ಥಿಕ ಲಾಭ, ಆದಾಯದ ವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂದು ನಂಬಲಾಗುತ್ತದೆ.
ಈ ನಂಬಿಕೆಯನ್ನು ಆಧರಿಸಿ ರೈತರು ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದು ಎತ್ತುಗಳ ಮಾಲಿಕರಾದ ಅಶೋಕ ಮಾಣಿಕ ಕ್ಷೇತ್ರಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಳು ಕ್ಷೇತ್ರಿ, ಕಲ್ಲಪ್ಪ ಬುಕ್ಕಾಣಿ, ರವಿ ಹೊಸಮನಿ, ಬಸಪ್ಪ ಇಂಡಿ, ನಿಂಗಣ್ಣ ಕಟಾಯಿ, ರಮೇಶ್ ಹೊಸಮನಿ, ಶ್ರೀಮಂತ ಕಟಾಯಿ, ರಾಜು ಕ್ಷೇತ್ರಿ, ಮಾದೇವ ಕುದರಿ, ಗಣಪತಿ ಕ್ಷೇತ್ರಿ, ಯಲ್ಲಪ್ಪ ಹೊಸಮನಿ, ಬುಡ್ಡಣ್ಣ ಬಾಗವಾನ, ಪಪ್ಪು ಧಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 